ಡಿಕೆಶಿ-ಸಚಿವ ಆನಂದ್ ಸಿಂಗ್ ಭೇಟಿ ಬಗ್ಗೆ ಹೆಚ್.ಡಿಕೆ ಪರೋಕ್ಷ ಟೀಕೆ.

ಬೆಂಗಳೂರು,ಜನವರಿ,31,2022(www.justkannada.in):  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್  ಮತ್ತು ಸಚಿವ ಆನಂದ್ ಸಿಂಗ್ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದ್ದು ಈ ಭೇಟಿ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪರೋಕ್ಷವಾಗಿ ಟೀಕಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ,  ಉತ್ತರ ಪ್ರದೇಶ, ಗೋವಾ, ಪಂಜಾಬ್ ಚುನಾವಣೆ ನಡೆಯುತ್ತಿದೆ.  ಬೆಳಿಗ್ಗೆ ಒಂದು ಸಂಜೆ ಮತ್ತೊಂದು ಪಕ್ಷದಲ್ಲಿರುತ್ತಾರೆ, ಇಂದು ರಾಜಕೀಯ ನಾಯಕರಲ್ಲಿ ನಿಷ್ಟೇ ಇಲ್ಲ.  ಇಂತವರು ಇಂತಹ ಪಕ್ಷದಲ್ಲಿ ಇರುತ್ತಾರೆ ಎಂದು ಊಹಿಸಲು ಆಗಲ್ಲ. ಚುನಾವಣೆ ಸಮಯಲ್ಲಿ ಏನು ಆಗುತ್ತೇ ನೋಡೋಣಾ ಎಂದು ಹೇಳಿದರು.

ಇಂದು ಸಚಿವ ಆನಂದ್ ಸಿಂಗ್ ಅವರು ಡಿ.ಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಅಲ್ಲದೆ ಇದು ಸೌಜನ್ಯಯುತ ಭೇಟಿ ಎಂದಿದ್ದರು.

Key words: DK Shivakumar-HDK-minister-Anand singh