ಜನ್ಮ ದಿನಾಂಕ ತಿರುಚಿ ಚುನಾವಣೆಗೆ ಸ್ಪರ್ಧೆ ಪ್ರಕರಣ; ಬಂಧನ ಭೀತಿಯಲ್ಲಿ ಮಾಜಿ ಸಚಿವ ಮತ್ತು ಪುತ್ರ 

ಬಳ್ಳಾರಿ,ಆ,8,2020(www.justkannada.in):  ಜನ್ಮ ದಿನಾಂಕ ತಿರುಚಿ ಚುನಾವಣೆಗೆ ಸ್ಪರ್ಧಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಶಾಸಕ ಪಿ.ಟಿ ಪರಮೇಶ್ವರ್ ನಾಯ್ಕ್ ಮತ್ತು ಪುತ್ರ ಭರತ್ ನಾಯ್ಕ್ ವಿರುದ್ದ ಎಫ್ ಐಆರ್ ಧಾಖಲಾಗಿದೆ.jk-logo-justkannada-logo

ಪುತ್ರನ ವಯಸ್ಸಿನ ಸುಳ್ಳು ದಾಖಲೆ ಸೃಷ್ಟಿಸಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ  ಆರೋಪದ ಮೇಲೆ ಹೂವಿನ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ, ಪುತ್ರ ಪಿ.ಟಿ. ಭರತ್ ಹಾಗೂ ಶಾಲಾ ಮುಖ್ಯಶಿಕ್ಷಕ ವಿರುದ್ಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ  ಎಫ್ ಐ ಆರ್ ದಾಖಲಾಗಿದೆ.

2015ರಲ್ಲಿನ  ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಲಕ್ಷ್ಮೀಪುರ ಗ್ರಾಮ ಪಂಚಾಯಿತಿಯಲ್ಲಿ ಸ್ಪರ್ಧಿಸಲು ಪರಮೇಶ್ವರ ನಾಯ್ಕ್ ಅವರ ಪುತ್ರ ಪಿ.ಟಿ. ಭರತ್ ಅವರ ಜನ್ಮ ದಿನಾಂಕ ತಿರುಚಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಜನ್ಮದಿನಾಂಕ ತಿರುಚಿರುವುದು ದೃಢಪಟ್ಟಿದ್ದು ಈ ಹಿನ್ನೆಲೆ ಶಾಸಕ ಪಿ.ಟಿ ಪರಮೇಶ್ವರ್ ನಾಯ್ಕ್ ಮತ್ತು ಪುತ್ರ ಭರತ್ ನಾಯ್ಕ್ ವಿರುದ್ದ ಎಫ್ ಐಆರ್ ಧಾಖಲಾಗಿದೆ.Contest – election- birtd date –FIR-former minister- PT Parameswar Naik-Son

ಪಿ.ಟಿ ಪರಮೇಶ್ವರ್ ನಾಯ್ಕ್ ಮತ್ತು ಪುತ್ರ ಭರತ್ ನಾಯ್ಕ್  ಬಂಧನ ಭೀತಿ ಎದುರಿಸುತ್ತಿದ್ದು  ನಿರೀಕ್ಷಣಾ ಜಾಮೀನು ಪಡೆಯಲು ಹರಸಾಹಸಪಡುತ್ತಿದ್ದು ತಲೆಮರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

Key words: Contest – election- birtd date –FIR-former minister- PT Parameswar Naik-Son