ಕಾಂಗ್ರೆಸ್ ಒಂದು ಮುಳುಗುವ ದೋಣಿಯಿದ್ದಂತೆ : ಡಿಸಿಎಂ ಡಾ.ಅಶ್ವಥ್ ನಾರಾಯಣ್ ಟೀಕೆ…

ಬೆಂಗಳೂರು,ಡಿಸೆಂಬರ್,15,2020(www.justkannada.in) : ಕಾಂಗ್ರೆಸ್ ಒಂದು ಮುಳುಗುವ ದೋಣಿಯಿದ್ದಂತೆ. ಅವರ ಸೋಲು ಎಲ್ಲಾ ರಂಗಗಳಲ್ಲೂ ಗೋಚರವಾಗುತ್ತಿದೆ. ಇಂದು ಸದನದಲ್ಲಿ ಅವರ ನಡವಳಿಕೆ ಈ ಸದನದ ಮೌಲ್ಯ ಹಾಗೂ ಗೌರವವನ್ನು ಕೆಡಿಸುವಂತದ್ದು ಎಂದು ಡಿಸಿಎಂ ಡಾ.ಅಶ್ವಥ್ ನಾರಾಯಣ ಟೀಕಿಸಿದ್ದಾರೆ.

Congress,one,sinking,boat,Minister,Dr.Ashwath Narayana

ಸದನದ ಶಿಷ್ಟಾಚಾರಕ್ಕೆ ತಕ್ಕಂತೆ ನಡೆದ ಅನೇಕ ಪುರುಷರು ಹಾಗೂ ಮಹಿಳಾ ಸದಸ್ಯರ ಉತ್ತಮ ನಡವಳಿಕೆಗೆ ಹಾಗೂ ನಮ್ಮ ಸಂವಿಧಾನಕ್ಕೆ ಮಾಡಿದ ಅಪಮಾನ ಇದು ಎಂದು ಕಿಡಿಕಾರಿದ್ದಾರೆ.

Congress-one-sinking-boat-Minister-Dr.Ashwath Narayana

ರಾಜ್ಯದ ಜನತೆ ಇಂತಹ ಅಸಂಬದ್ಧ ನಡವಳಿಕೆಯನ್ನು ಗಮನಿಸುತ್ತಿದ್ದಾರೆ ಹಾಗೂ ವಿರೋಧಿಸುತ್ತಾರೆ ಎಂದು ಅರಿಯಬೇಕಿದೆ. ನಾನು ಕೂಡಾ ಈ ರಾಜ್ಯದ ಜನತೆಯಂತೆ ಇಂದು ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯರು ತೋರಿದ ನಡವಳಿಕೆಯನ್ನು ಖಡಾ-ಖಂಡಿತವಾಗಿ ವಿರೋಧಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

key words : Congress-one-sinking-boat-Minister-Dr.Ashwath Narayana