ವಿಶ್ವಾಸಾರ್ಹತೆ ಕಳೆದುಕೊಂಡಿರುವ ಎಸ್ಐಟಿಯಿಂದ ನಿಸ್ಪಕ್ಷಪಾತ ತನಿಖೆ ಸಾಧ್ಯವಿಲ್ಲ” : ಶಾಸಕ ಈಶ್ವರ್ ಖಂಡ್ರೆ 

ಬೆಂಗಳೂರು,ಮಾರ್ಚ್,16,2021(www.justkannada.in) : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ನಿಸ್ಪಕ್ಷಪಾತ ತನಿಖೆಗೆ ಮೊದಲಿನಿಂದಲೂ ಒತ್ತಾಯಿಸುತ್ತಾ ಬಂದಿದ್ದೇವೆ. ವಿಶ್ವಾಸಾರ್ಹತೆ ಕಳೆದುಕೊಂಡಿರುವ ಎಸ್ಐಟಿಯಿಂದ ಅದು ಸಾಧ್ಯವಿಲ್ಲವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟೀಕಿಸಿದ್ದಾರೆ.CD case-Reliability-Lost-SIT-Cannot-Legislator-Ishwar Khandre ಅಪರಾಧ ಮಾಡುವವರು, ದೌರ್ಜನ್ಯ ಎಸಗುವವರು ಬಿಜೆಪಿಯವರು. ಆರೋಪ ಬೇರೆಯವರ ಮೇಲೆ ಮಾಡುತ್ತಾರೆ. ಹೈಕೋರ್ಟ್ ನಿಗಾದಲ್ಲೇ ಸಿಡಿ ಪ್ರಕರಣದ ತನಿಖೆ ಮಾಡಬೇಕು. ತಪ್ಪಿತಸ್ತರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸರ್ಕಾರವನ್ನ ಒತ್ತಾಯಿಸುತ್ತೇನೆ ಎಂದಿದ್ದಾರೆ.

CD case-Reliability-Lost-SIT-Cannot-Legislator-Ishwar Khandre 

ಬಿಜೆಪಿ ಸುಳ್ಳಿನ ಕಾರ್ಖಾನೆ. ಸುಳ್ಳನ್ನೇ ಸತ್ಯವೆಂದು ಬಿಂಬಿಸುತ್ತಾರೆ. ಕಾಂಗ್ರೆಸ್ ನಾಯಕರ ಮೇಲೆ ಸುಳ್ಳು ಆರೋಪ ಮಾಡುವ ಕೀಳು ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

key words : CD case-Reliability-Lost-SIT-Cannot-Legislator-Ishwar Khandre