• Home
  • News
  • Politics
  • Crime
  • Cinema
  • Media Masala
  • Rasayana
  • Tenders
  • Mysuru
    • Essential Services in Mysuru
    • Mysore PIN Codes
  • Subscribe
  • Checkout
Search
Friday, May 9, 2025
Sign in
Welcome! Log into your account
Forgot your password? Get help
Create an account
Privacy Policy
Create an account
Welcome! Register for an account
A password will be e-mailed to you.
Privacy Policy
Password recovery
Recover your password
A password will be e-mailed to you.
Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ
vtu
  • Home
  • News
  • Politics
  • Crime
  • Cinema
  • Media Masala
  • Rasayana
  • Tenders
  • Mysuru
    • Essential Services in Mysuru
    • Mysore PIN Codes
  • Subscribe
  • Checkout
Home Front Page ಸುಪ್ರೀಂಕೋರ್ಟ್ ಮಾನದಂಡಗಳಂತೆ ಸಮೀಕ್ಷೆ ನಡೆಸಿ ಜಾತಿ ಜನಗಣತಿ ವರದಿ ಸಲ್ಲಿಸಲಾಗಿದೆ-ಕೆ.ಎನ್.ಲಿಂಗಪ್ಪ
  • Front Page
  • News

ಸುಪ್ರೀಂಕೋರ್ಟ್ ಮಾನದಂಡಗಳಂತೆ ಸಮೀಕ್ಷೆ ನಡೆಸಿ ಜಾತಿ ಜನಗಣತಿ ವರದಿ ಸಲ್ಲಿಸಲಾಗಿದೆ-ಕೆ.ಎನ್.ಲಿಂಗಪ್ಪ

By
prashanth
-
2023-11-29
Facebook
Twitter
Pinterest
WhatsApp

    ಮೈಸೂರು,ನವೆಂಬರ್,29,2023(www.justkannada.in): ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯನ್ನು ಸರ್ವೋಚ್ಚ ನ್ಯಾಯಾಲಯದ ಮಾನದಂಡಗಳಂತೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗಿದೆ ಎಂದು ಕಾಂತರಾಜು ಆಯೋಗದಲ್ಲಿ ಸದಸ್ಯರಾಗಿದ್ದ ಕೆ.ಎನ್.ಲಿಂಗಪ್ಪ ಹೇಳಿದರು.

    ನಗರದ ಪತ್ರಕರ್ತರ ಭವನದಲ್ಲಿಂದು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನಡೆದ ಮಾಧ್ಯಮ ಸಂವಾದದಲ್ಲಿ ಭಾಗಿಯಾಗಿ ಮಾತನಾಡಿದ ಕೆ.ಎನ್.ಲಿಂಗಪ್ಪ, 1892 ರಂದು ಬ್ರಿಟೀಷ್ ಆಡಳಿತದಲ್ಲಿ ಜಾರಿಗೆ ಬಂದ ಜನಗಣತಿಯಲ್ಲಿ ಜಾತಿಯು ಪ್ರಮುಖ ಮಾನದಂಡವಾಯಿತು. 1958 ರಲ್ಲಿ ಭಾರತ ಸರ್ಕಾರದ ಜನಗಣತಿ ಕಾಯ್ದೆ ಜಾತಿಯನ್ನು ಕಡೆಗಣಿಸಿದ್ದಕ್ಕೆ ಕಾರಣ ತಿಳಿದಿಲ್ಲ. ಆದರೆ, ರಾಜ್ಯದಲ್ಲಿ ಜಾರಿಗೆ ಬಂದ ಮಿಲ್ಲರ್ ಸಮಿತಿ ವರದಿ, ಕೇಂದ್ರದ ಮಂಡಳದ ವರದಿಗಳು ಜಾತಿಯನ್ನು ಪರಿಗಣಿಸಿ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯನ್ವಯ ಪ್ರತಿಪಾದಿಸುವುದು. ಇಂದಿರಾ ಸಹನಿ ವರ್ಸ್ಸ್ ಭಾರತ ಸರ್ಕಾರದ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಕೂಡ ಬಹುಮತದೊಂದಿಗೆ ಇಂತಹ ವರದಿಗಳ ಸಿಂಧುತ್ವವನ್ನು ಎತ್ತಿ ಹಿಡಿದಿದೆ. ಈ ಎಲ್ಲ ಆಧಾರದಲ್ಲಿ ರಾಜ್ಯದಲ್ಲಿ ನಡೆದ ಸಮೀಕ್ಷೆಯು ನ್ಯಾಯಸಮ್ಮತವಾಗಿದೆ ಎಂದು ತಿಳಿಸಿದರು.

    ಕಾಂತರಾಜ ಆಯೋಗದ ವರದಿಯಲ್ಲಿದ್ದ ಐವರೂ ಸದಸ್ಯರು ಬೇರೆ ಬೇರೆ ಜಾತಿಗೆ ಸೇರಿದವರಾಗಿದ್ದಾರೆ ಮತ್ತು ತಜ್ಞರು ಹಿಂದಿನ ಆಯೋಗಗಳ ಅಧ್ಯಕ್ಷರನ್ನು ಸಂಪರ್ಕಿಸಿ ವಿವಿಧ ಮಾನದಂಡಗಳ ಮೂಲಕ 2,500 ಮುಖ್ಯ ತರಬೇತಿದಾರರು 22,186 ಮೇಲ್ವಿಚಾರಕರು ಹಾಗೂ 1,36,416 ಸಿಬ್ಬಂದಿಗಳ ಮೂಲಕ ಸಮೀಕ್ಷೆ ನಡೆಸಲಾಗಿದೆ. 1361 ಜಾತಿಗಳನ್ನು ಪಟ್ಟಿ ಮಾಡಲಾಗಿದೆ. ಸಮೀಕ್ಷೆಯಲ್ಲಿ ಬಗೆಯ ಅಂಶಗಳ ಮಾಹಿತಿಗಳನ್ನು ಜನರಿಂದ ಕಲೆ ಹಾಕಲಾಗಿದೆ.  ಬೆಂಗಳೂರಿನಂತಹ ನಗರದಲ್ಲಿ ಸಮೀಕ್ಷೆಗೆ ಸ್ವಲ್ಪ ಹಿನ್ನೆಡೆಯಾಗಿರಬಹುದು. ಆದರೆ, ರಾಜ್ಯಾದಾದ್ಯಂತ ಶೇ.99ರಷ್ಟು ಪ್ರಗತಿಯೊಂದಿಗೆ ಸಮೀಕ್ಷೆಯಾಗಿದೆ ಎಂದು ತಿಳಿಸಿದರು.

    ನಾವು ಸಮೀಕ್ಷೆಯ ಪ್ರಗತಿ ಮತ್ತು ಸರಿಯಾದ ಗತಿಯಲ್ಲಿ ನಡೆಯುತ್ತಿದೆ ಆಯೋಗದ ಸದಸ್ಯರು ಪರಿಶೀಲಿಸಿದ್ದೇವೆ ಹೊರತು ಮೊದಲು ನೀಡಿದ ಮಾನದಂಡಗಳಂತೆ ಜಿಲ್ಲಾಧಿಕಾರಿ, ವಿಭಾಗಾಧಿಕಾರಿ, ತಹಶೀಲ್ದಾರರ ಮೂಲಕ ಸಮೀಕ್ಷೆ ನಡೆದಿದೆ. ಹೀಗಾಗಿ ಆಯೋಗದ ಸದಸ್ಯರು ಕಚೇರಿಯಲ್ಲಿ ಕುಳಿತು ವರದಿ ಮಾಡಿದ್ದರು, ಜಾತಿ ತಾರಾತಮ್ಯದಲ್ಲಿ ಮಾಡಿದ್ದಾರೆ ಎಂಬ ಆರೋಪವು ಸತ್ಯಕ್ಕೆ ದೂರವಾದದ್ದು. ಇದೊಂದು ಕಪೋಲ ಕಲ್ಪಿತ ಆರೋಪ.  ಸಮೀಕ್ಷೆಗೆ ತೆರಳಿದಾಗ ಜನರು ಹೇಳಿದ ಅಂಕಿ-ಅಂಶಗಳನ್ನು ದಾಖಲಿಸಿದ್ದೇವೆ ಹೊರತು ನಾವು ಯಾವುದನ್ನು ಸೇರಿಸಿಲ್ಲ ಎಂದು ಸ್ಪಷ್ಟಪಡಿಸಿದರು.

    1500 ಪುಟಗಳ ಮುದ್ರಿತ ಪ್ರತಿ ಸಿದ್ದವಾಗಿತ್ತು. ಸರ್ಕಾರದ ಅವಧಿ ಮುಗಿದಿದ್ದರಿಂದ ಆ ಸಂದರ್ಭದಲ್ಲಿ ಮುದ್ರಿತ ಪ್ರತಿ ಎಲ್ಲ ದಾಖಲೆಗಳನ್ನು ಸರ್ಕಾರದ ಕೊಠಡಿಯಲ್ಲಿ ಇಟ್ಟು ಮುದ್ರೆ ಹಾಕಿ ಸರ್ಕಾರಕ್ಕೆ ನೀಡಲಾಗಿತ್ತು. ಮುಖ್ಯ ಕಾರ್ಯದರ್ಶಿಗಳಿಗೆ ಕೊಠಡಿಯ ಬೀಗದ ಕೈಯನ್ನು ನೀಡಲಾಗಿತ್ತು. ಬಳಿಕ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ವರದಿಯ ಅನುಷ್ಠಾನ ಕಾಳಜಿ ತೋರದ ಕಾರಣ ಅದು ನೆನೆಗುದಿಗೆ ಬಿತ್ತು. ವರದಿಯಲ್ಲಿ ಎರಡು ಭಾಗವಿದೆ. ದತ್ತಾಂಶಗಳ ಭಾಗಕ್ಕೆ ಅಧ್ಯಕ್ಷರು, ಸದಸ್ಯರು, ಸದಸ್ಯ ಕಾರ್ಯದರ್ಶಿಗಳ ಸಹಿ ಹಾಕಲಾಗಿದೆ.  ವರದಿಯ ಭಾಗಕ್ಕೆ ಅಧ್ಯಕ್ಷರ, ಸದಸ್ಯರು ಸಹಿ ಹಾಕಲಾಗಿದ್ದು, ಸದಸ್ಯ ಕಾರ್ಯದರ್ಶಿಯ ಸಹಿ ಹಾಕಿರುವುದಿಲ್ಲ. ಆದರೆ, ವರದಿಯ ಸಭೆಗಳ‌ ನಡವಳಿಗೆ ಸದಸ್ಯ ಕಾರ್ಯದರ್ಶಿ ಸಹಿ ಹಾಕಲಾಗಿದೆ. ವರದಿ ಸ್ಬೀಕಾರಕ್ಕೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೂ ಏಕೇ ವಿಳಂಬವಾಯಿತು ಎಂಬುದು ನಿಗೂಢವಾಗಿದೆ ಎಂದು ಕೆ.ಎನ್.ಲಿಂಗಪ್ಪ ಹೇಳಿದರು.

    ಬಳಿಕ ಬಂದ ಆಯೋಗ ವರದಿಯಲ್ಲಿ ಮುದ್ರಿತ ಪ್ರತಿಯಿದೆ. ಅಸ್ತಪ್ರತಿ ಕಾಣೆಯಾಗಿದೆ ಎಂದಿರುವುದು ಗೊಂದಲಕಾರಿಯಾಗಿದೆ. ಹೊಸ ಆಯೋಗ ಯಾರ ಅನುಮತಿ ಪಡೆದು ವರದಿ ಪರಿಶೀಲನೆಗೆ ತೆರಳಿತು ಎಂಬ ಮಾಹಿತಿ ಇಲ್ಲ ಇದನ್ನು ಸರ್ಕಾರ ತನಿಖೆಗೆ ಒಳಪಡಿಸಬೇಕು. ವರದಿ ದತ್ತಾಂಶ ಹಾಗೂ ಮಾಹಿತಿಗಳು ಸರ್ಕಾರದಲ್ಲಿ ಸುರಕ್ಷಿತವಾಗಿರುತ್ತವೆ. ಅದನ್ನು ಯಾರು ನಾಶ ಮಾಡಲು ಸಾಧ್ಯವಿಲ್ಲ, ತಿರುಚಲು ಸಾಧ್ಯವಿಲ್ಲ. ಸಂಪೂರ್ಣ ಮಾಹಿತಿಯೊಂದಿಗೆ ವರದಿ‌ ನೀಡಲು ಸಾಧ್ಯವಿದೆ.  ವರದಿ ಅನುಷ್ಠಾನಕ್ಕೆ ವಿಳಂಬವಾದರೂ ವರದಿ ಅನುಷ್ಠಾನ ಔಚಿತ ಪೂರ್ಷವಾಗಿ ಇರಲಿದೆ ಎಂದು ಕೆ.ಎನ್‌ ಲಿಂಗಪ್ಪ ಹೇಳಿದರು.

    Key words: Caste census -report – submitted – Supreme Court – K.N. Lingappa

    • TAGS
    • caste census
    • K.N. Lingappa
    • Report
    • submitted
    • Supreme Court
    Facebook
    Twitter
    Pinterest
    WhatsApp
      Previous articleಅಧಿವೇಶನದಲ್ಲಿ ವಿರೋಧಪಕ್ಷದ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಸಿದ್ಧ –ಸಿಎಂ ಸಿದ್ದರಾಮಯ್ಯ
      Next articleವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ: ಮೈಸೂರು ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರತಿಭಟನೆ.
      prashanth

      RELATED ARTICLESMORE FROM AUTHOR

      ಇಂದು, ನಾಳೆ ಬಿಳಿಗಿರಿ ರಂಗನಾಥ ಬೆಟ್ಟಕ್ಕೆ ದ್ವಿಚಕ್ರ ವಾಹನಗಳ ನಿಷೇಧ.

      ಬಯಲುಸೀಮೆ ಜಿಲ್ಲೆಗಳಿಗೆ ಶೀಘ್ರವೇ ಎತ್ತಿನಹೊಳೆ ನೀರು: ಡಿಸಿಎಂ ಡಿ.ಕೆ ಶಿವಕುಮಾರ್

      ನಾಳೆ ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ ಮೈಸೂರು ಜಿಲ್ಲಾ ಪ್ರವಾಸ

      Sponsor Ads 1

      Sponsor Ads 2

      Sponsor Ads 3

      Sponsor Ads 4

      EDITOR PICKS

      BREAKING NOW: ಉದಯಗಿರಿ “ ಪ್ರಚೋಧನಕಾರಿ ಪೋಸ್ಟ್‌ “: ಜಾಮೀನು ಕೋರಿ ಕೋರ್ಟ್‌ ಮೊರೆ...

      2025-02-13

      5 ವರ್ಷದಲ್ಲಿ 20 ಲಕ್ಷ ಉದ್ಯೋಗ : ನೂತನ ಕೈಗಾರಿಕಾ ನೀತಿ ಬಿಡುಗಡೆ ಮಾಡಿದ...

      2025-02-11

      ಜಾಗತಿಕ ಹೂಡಿಕೆದಾರರ ಸಮಾವೇಶ : 12 ವಿಶೇಷ ಹೂಡಿಕೆ ವಲಯ ಸ್ಥಾಪನೆ: ಸಚಿವ ಎಂ...

      2025-02-11

      POPULAR POSTS

      ಪಬ್ಲಿಕ್ ಟಿವಿ ಸಂಪಾದಕ ರಂಗನಾಥ್ ಕಾಲೆಳೆದ ವಿಡಿಯೋ ವೈರಲ್ ಮಾಡಿದ್ದು ಸರಿನಾ..?

      2020-03-30

      ಈ ದಂಪತಿ ನೋಡಿ ಮೈಸೂರಿನ ದೇವರಾಜ ಮಾರುಕಟ್ಟೆ ವ್ಯಾಪಾರಿಗಳಿಗೆ ಭಾನುವಾರ ಬೆಳ್ಳಂಬೆಳಗ್ಗೆ ಶಾಕ್..!

      2019-06-16

      ಇಂತವರಿಂದ ಪಕ್ಷ ಕಟ್ಟಿ ಬೆಳೆಸಲು ಸಾಧ್ಯವಿಲ್ಲ: ಮೈಸೂರಿನಲ್ಲೆ ಪಕ್ಷದಿಂದ ಉಚ್ಚಾಟಿಸುತ್ತೇನೆ- ಪರೋಕ್ಷ ಆಕ್ರೋಶ ವ್ಯಕ್ತಪಡಿಸಿದ...

      2021-01-05

      POPULAR CATEGORY

      • Front Page42448
      • News42432
      • Politics24732
      • Crime3847
      • Cinema3496
      • Sports1299
      • Tenders415
      • Media Masala360
      Just Kannada
      ABOUT US
      Just Kannada is a global platform for all issues related to Kannada. At the very root, it’s a news-driven portal. Everything that’s happening in Karnataka, or whatever that’s happening anywhere in the world that has any consequence to Karnataka, is updated here every minute.
      Contact us: info@justkannada.in
      • Terms & Conditions
      • Privacy Policy
      • Refund Policy
      • Grievances
      • Statistics
      • Contact

      Copyright © 2017- . All Rights Reserved: Just Kannada - News 24x7 | Hosted by: DIGICUBE SOLUTIONS

      Subscribe to our News Service @ Just Rs. 399/- per Year and Get Daily Updates Directly to Your Mobile Phones     Subscribe Now | Checkout