ಬೆಂಗಳೂರು ಗಲಭೆ ಕೇಸ್: ನಾಳೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಕಾರ್ಪೋರೇಟರ್ ಗಳಿಬ್ಬರಿಗೆ ಸೂಚನೆ…

ಬೆಂಗಳೂರು, ಆಗಸ್ಟ್,19,2020(www.justkannada.in):  ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಪೋರೇಟರ್ ಗಳಾದ ಸಂಪತ್ ರಾಜ್ ಮತ್ತು ಜಾಕೀರ್ ಹುಸೇನ್ ಅವರನ್ನು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಸೂಚನೆ ನೀಡಿದ್ದಾರೆ.jk-logo-justkannada-logo

ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಮುಂಜಾನೆಯಿಂದ ಸಂಜೆವರೆಗೆ ಇಬ್ಬರು ಕಾರ್ಪೋರೇಟರ್ ಗಳನ್ನ ಸಿಸಿಬಿ ವಿಚಾರಣೆ ನಡೆಸಿತ್ತು. ಬಳಿಕ ಕಾರ್ಪೋರೇಟರ್ ಗಳ ಮೊಬೈಲ್ ಗಳನ್ನು ವಶಪಡಿಸಿಕೊಂಡು ಮೊದಲ ಹಂತದ ವಿಚಾರಣೆ ಮುಕ್ತಾಯಗೊಳಿಸಲಾಗಿತ್ತು.Bangalore- riot case-Corporators -ordered - attend - hearing –again- tomorrow.

ಇದೀಗ ಗುರುವಾರ(ನಾಳೆ) ಇಬ್ಬರು ಕಾರ್ಪೋರೇಟರ್ ಗಳಿಗೂ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಸೂಚನೆ ನೀಡಿದ್ದಾರೆ.

Key words: Bangalore- riot case-Corporators -ordered – attend – hearing –again- tomorrow.