ಮುರುಘಾ ಶ್ರೀಗಳ ಬಂಧನ, ತನಿಖೆಯಲ್ಲಿ ವಿಳಂಬವಾಗಿಲ್ಲ-ಗೃಹ ಸಚಿವ ಅರಗ ಜ್ಞಾನೇಂದ್ರ.

ಶಿವಮೊಗ್ಗ,ಸೆಪ್ಟಂಬರ್,2,2022(www.justkannada.in):  ಪೋಕ್ಸೋ ಕಾಯ್ದೆಯಡಿ  ಮುರುಘಾ ಶ್ರೀಗಳ ಬಂಧನವಾಗಿದ್ದು ತನಿಖೆಯಲ್ಲಿ ವಿಳಂಬವಾಗಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ಈ ಕುರಿತು ಇಂದು ಶಿವಮೊಗ್ಗದಲ್ಲಿ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಪ್ರಕರಣ ಸಂಬಂಧ ಕಾನೂನು ರೀತಿಯಲ್ಲಿ ತನಿಖೆ ನಡೆಯುತ್ತಿದೆ. ಮಠ ಮತ್ತು ಚಿತ್ರದುರ್ಗದಲ್ಲಿ ಭಧ್ರತೆ ಹೆಚ್ಚಿಸಲಾಗಿದೆ.  ಶ್ರೀಗಳ ಬಂಧನ ತನಿಖೆಯಲ್ಲಿ ವಿಳಂಬವಾಗಿಲ್ಲ. ಪ್ರಕರಣದಲ್ಲಿ ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡಲಾಗಿದೆ ಎಂದಿದ್ದಾರೆ.

Key words: Arrest –Muruga shri-case- no delay – investigation – Home Minister- Araga jnanendra