ನಟ ದರ್ಶನ್ ಮತ್ತಿಬ್ಬರ ಮೇಲೂ ಹಲ್ಲೆ ಮಾಡಿದ್ಧಾರೆ- ಇಂದ್ರಜಿತ್ ಲಂಕೇಶ್ ಆರೋಪ.

ಬೆಂಗಳೂರು,ಜುಲೈ,15,2021(www.justkannada.in): ಸಂದೇಶ್ ಪ್ರಿನ್ಸ್ ಹೋಟೆಲ್ ಸಪ್ಲೈಯರ್ ಮೇಲೆ ನಟ ದರ್ಶನ್ ಹಲ್ಲೆ ಮಾಡಿದ್ದಾರೆಂದು ದೂರು ನೀಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್, ಸಂದೇಶ್ ಹೋಟೆಲ್ ಸಪ್ಲೈಯರ್ ಹಾಗೂ ಇನ್ನಿಬ್ಬರ ಮೇಲೂ ನಟ ದರ್ಶನ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.jk

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್,  ಸಂದೇಶ್ ಪ್ರಿನ್ಸ್ ನಲ್ಲಿ ಸಪ್ಲೈಯರ್ ಮೇಲೆ ಹಲ್ಲೆ ನಡೆಸಿದ್ದೇ ದರ್ಶನ್.  ಲಾಕ್ ಡೌನ್ ಸಮಯದಲ್ಲಿ ದರ್ಶನ್ ಹಾಗೂ ಗ್ಯಾಂಗ್ ಮೋಜು ಮಸ್ತಿಯಲ್ಲಿ ತೊಡಗಿದೆ. ಜೂನ್ 24 ಹಾಗೂ 25ರಂದು ಮೈಸೂರಿನ ಸಂದೇಶ್ ಹೋಟೆಲ್ ನಲ್ಲಿ ಭರ್ಜರಿ ಪಾರ್ಟಿ ನಡೆಸಿದ್ದಾರೆ. ರಾತ್ರಿ 3ಗಂಟೆ ವೇಳೆ ಗಲಾಟೆ ನಡೆದಿದೆ. ಈ ವೇಳೆ ನಟ ದರ್ಶನ್ ಹೋಟೆಲ್ ಸಪ್ಲೈಯರ್ ಗಂಗಾಧರ್ ಎಂಬ ಕನ್ನಡಿಗನ ಮೇಲೆ ಹಲ್ಲೆ  ಮಾಡಿದ್ದಾರೆ. ಗಲಾಟೆಯಾದ ಮಾರನೆ ದಿನವೇ ಹೋಟೆಲ್ ಸಿಬ್ಬಂದಿಗಳು ಕೆಲಸ ಬಿಡಲು ಸಿದ್ಧರಿದ್ದರು ಆದರೆ ಸಂದೇಶ್ ನಾಗರಾಜ್ ಸೇರಿದಂತೆ ಎಲ್ಲರೂ ಸಿಬ್ಬಂದಿಗಳ ಮನವೊಲಿಕೆ ಮಾಡಿದ್ದಾರೆ.  ಹಲ್ಲೆ ಬಳಿಕ ನಟ ದರ್ಶನ್ ಮತ್ತು ತಂಡವನ್ನ ಸಂದೇಶ್ ಹೊರದಬ್ಬಿದ್ದಾರೆ ಎಂದು ತಿಳಿಸಿದರು.

ಇನ್ನು ಗೋಪಾಲ್ ಅರಸ್ ಎಂಬಾತನ ಮೇಲೆ ಜು.3ರಂದು ಸೋಷಿಯಲ್ಸ್ ನಲ್ಲಿ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಗೋಪಾಲ್ ಕೋಮಾದಲ್ಲಿದ್ದಾನೆ. ಇನ್ನು ಶ್ರೀರಂಗಪಟ್ಟಣದಲ್ಲಿರುವ ದರ್ಶನ್ ತೋಟದ ಮನೆಯ ಕಾವಲುಗಾರನನ್ನು ಥಳಿಸಿದ್ದಾರೆ. ಹಲ್ಲೆಗೊಳಗಾದ ಸೆಕ್ಯೂರಿಟಿ ಗಾರ್ಡ್ ಕೆಲಸ ಬಿಟ್ಟಿದ್ದಾನೆ ಎಂದು ಇಂದ್ರಜಿತ್ ಲಂಕೇಶ್ ಆರೋಪ ಮಾಡಿದ್ದಾರೆ.

ದರ್ಶನ್ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ ಆದರೆ ಸೆಲೆಬ್ರಿಟಿಗಳೆಂದು ಇಂತಹ ವರ್ತನೆಗಳನ್ನು ಮಾಡುವುದು ತಪ್ಪು. ಸಾಮಾಜಿಕ ಕಳಕಳಿಯಿಂದ ಹಾಗೂ ಬಡವರ ಮೇಲಿನ ದೌರ್ಜನ್ಯವನ್ನು ನಾನು ಪ್ರಶ್ನಿಸುತ್ತಿದ್ದೇನೆ. ಇಷ್ಟೆಲ್ಲ ಅನ್ಯಾಯಗಳು ನಡೆಯುತ್ತಿದ್ದರೂ ನೋಡುತ್ತಾ ಸುಮ್ಮನಿರಲಾಗದು. ತಪ್ಪನ್ನು ಮುಚ್ಚಿಡಲು ಮತ್ತೆ ಮತ್ತೆ ತಪ್ಪು ಮಾಡುತ್ತಿದ್ದಾರೆ. ಯಾವುದೇ ಹೋಟೆಲ್ ನಲ್ಲಿ 60 ದಿನಗಳ ಸಿಸಿ‌ ಟಿವಿ ಕ್ಯಾಮರಾ ರೆಕಾರ್ಡ್ ಸಂಗ್ರಹವಿರಬೇಕು ಎಂಬ ನಿಯಮವಿದೆ. ತಾಜ್ ಹೋಟೆಲ್ ಮೇಲಿನ ದಾಳಿ ಬಳಿಕ ಸರ್ಕಾರವೇ ಮಾಡಿದ ನಿಯಮವಿದು. ಸಂದೇಶ್ ಹೋಟೆಲ್ ನಲ್ಲಿ 10 ದಿನದಲ್ಲಿ ಸಿಸಿ ಟಿವಿ ದೃಶ್ಯ ಡಿಲಿಟ್ ಆಗುತ್ತೆ ಎಂದು ಅವರು ಹೇಳುವುದಾದರೆ ನಿಯಮ ಉಲ್ಲಂಘನೆ ಮಾಡುವ ಮೂಲಕ ಸೆಲೆಬ್ರಿಟಿ ರಕ್ಷಣೆಗೆ ನಿಂತಿದ್ದಾರೆ ಎಂದರ್ಥ ಎಂದು ಇಂದ್ರಜಿತ್ ಲಂಕೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Key words: Actor- Darshan -also been- assaulted-Indrajit Lankesh