ಈ ಮೂರು ಕ್ಷೇತ್ರಗಳಲ್ಲಿ ಗೆಲ್ಲಬೇಕಾಗಿತ್ತು. ಆದರೆ ಹಿನ್ನಡೆಯಾಗಿದೆ- ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ.

ಬೆಳಗಾವಿ,ಡಿಸೆಂಬರ್,15,2021(www.justkannada.in):  ರಾಜ್ಯದ ವಿಧಾನ ಪರಿಷತ್ 25 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ನಿನ್ನೆ ಪ್ರಕಟವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ,  ಬೆಳಗಾವಿ, ಮೈಸೂರು, ತುಮಕೂರಿನಲ್ಲಿ ಗೆಲ್ಲಬೇಕಿತ್ತು ಆದರೆ ಹಿನ್ನಡೆಯಾಗಿದೆ ಎಂದಿದ್ದಾರೆ.

ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಪರಿಷತ್ ನಲ್ಲಿ 1 ಸ್ಥಾನ ಕಡಿಮೆಯಾಗುತ್ತದೆ ಆದರೆ ಕಾರ್ಯಕಲಾಪ ನಡೆಸಲು ಅಡ್ಡಿ ಇಲ್ಲ. ಜೆಡಿಎಸ್ ನವರು ಸಹಕಾರ ನೀಡಲಿದ್ದಾರೆ.  ಸೋಲಿನ  ಪರಾಮರ್ಶೆ ಮಾಢುವುದಾಗಿ ಸಿಎಂ ಹೇಳಿದ್ದಾರೆ. ಪರಾಮರ್ಶೆ ಮಾಡಿ ವಾಸ್ತವ ತಿಳಿಯಲು ಪ್ರಯತ್ನ ಪಡುತ್ತೇವೆ ಎಂದರು.

ಪರಿಷತ್ ನ 25 ಸ್ಥಾನಗಳ ಚುನಾವಣೆಯಲ್ಲಿ ಬಿಜೆಪಿ 11 ಕಾಂಗ್ರೆಸ್ 11 ಜೆಡಿಎಸ್ 2 ಇತರೇ 1 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ.

Key words: win -these -three –seat-  Former CM -BS Yeddyurappa.