ದಿಲ್ಲಿ ಸಿಎಂ ವರ್ಸಸ್ ಯುಪಿ ಮುಖ್ಯಮಂತ್ರಿ: ಟ್ವಿಟ್ಟರ್’ನಲ್ಲಿ ಟಾಕ್ ವಾರ್ !

ಬೆಂಗಳೂರು, ಫೆಬ್ರವರಿ 08, 2022 (www.justkannada.in): ಸೋಮವಾರ ಮಧ್ಯರಾತ್ರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಡುವೆ ಟ್ವೀಟರ್ ವಾರ್ ನಡೆದಿದೆ.

ಹೌದು. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಂತೆಯೇ ರಾಜಕೀಯ ಪಕ್ಷಗಳ ನಡುವೆ ಟಾಕ್ ವಾರ್ ಶುರುವಾಗಿದೆ.

ಸಾರ್ವಜನಿಕ ವೇದಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರರ ನಡುವೆ ತೀವ್ರ ಟೀಕೆಗಳು ನಡೆಯುತ್ತಿವೆ.

ಸೋಮವಾರ ಮಧ್ಯರಾತ್ರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಡುವೆ ಟ್ವೀಟರ್ ವಾರ್ ನಡೆದಿದೆ.