ಕಾಂಗ್ರೆಸ್ ಗ್ಯಾರಂಟಿಗಳು ಚುನಾವಣೆ ವೇಳೆ ಎಫೆಕ್ಟ್ ಆಗಲ್ಲ- ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್.

ಚಾಮರಾಜನಗರ,ಮಾರ್ಚ್,14,2024(www.justkannada.in): ಕಾಂಗ್ರೆಸ್ ಗ್ಯಾರಂಟಿಗಳು ಚುನವಣೆ ವೇಳೆ ಎಫೆಕ್ಟ್ ಆಗಲ್ಲ ಗ್ಯಾರಂಟಿಗಳನ್ನಸಮರ್ಪಕವಾಗಿ ಕಾಂಗ್ರೆಸ್ ನಿಭಾಯಿಸಿಲ್ಲ ಎಂದು  ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ಬಾಲರಾಜ್ ನುಡಿದರು.

ತಮಗೆ ಚಾಮರಾಜನಗರ ಕ್ಷೇತ್ರದಿಂದ ಟಿಕೆಟ್ ಸಿಕ್ಕ ಹಿನ್ನೆಲೆ ಈ ಕುರಿತು ಮಾತನಾಡಿದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್, ನನಗೆ ಟಿಕೆಟ್ ಸಿಗುವ ವಿಶ್ವಾಸವಿರಲಿಲ್ಲ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪಕ್ಷ ಟಿಕೆಟ್ ನೀಡಿದೆ. ಮೋದಿಯವರನ್ನು ಪ್ರಧಾನಿ ಮಾಡುವ ಕೆಲಸ ಮಾಡುತ್ತೇವೆ. ಆಕಾಂಕ್ಷಿಗಳನ್ನ ವಿಶ್ವಾಸಕ್ಕೆ ಪಡೆದು ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

Key words: Congress- guarantees -will -not be- effective – elections – BJP candidate -S. Balaraj.