Friday, August 7, 2026

BDA Apartments

Home Front Page ಇಂದಿನಿಂದ 4ದಿನ ಶಾಸಕರು, ಸಚಿವರ ಜೊತೆ  ಸಿಎಂ ಸಿದ್ದರಾಮಯ್ಯ ಸಭೆ, ಚರ್ಚೆ

ಇಂದಿನಿಂದ 4ದಿನ ಶಾಸಕರು, ಸಚಿವರ ಜೊತೆ  ಸಿಎಂ ಸಿದ್ದರಾಮಯ್ಯ ಸಭೆ, ಚರ್ಚೆ

ಬೆಂಗಳೂರು,ಜುಲೈ,29,2025 (www.justkannada.in):  ಸಿಎಂ ಸಿದ್ದರಾಮಯ್ಯ ಇಂದಿನಿಂದ 4 ದಿನಗಳ ಕಾಲ ಸಚಿವರು ಶಾಸಕರ ಜೊತೆ ಸಭೆ ನಡೆಸಿ ಚರ್ಚಿಸಲಿದ್ದಾರೆ.

4 ದಿನಗಳ ಕಾಲ ಶಾಸಕರ ಜೊತೆ ಉಸ್ತುವಾರಿ ಸಚಿವರ ಸಮ್ಮುಖದಲ್ಲಿಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದು ಅನುದಾನ, ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.   ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ರೂ. ಅನುದಾನ ವಿಚಾರವಾಗಿ ಚರ್ಚೆ ನಡೆಯಲಿದೆ.

ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್  ಸಭೆಯಲ್ಲಿ ಪಾಲ್ಗೊ:ಳ್ಳುವುದಿಲ್ಲ ಎನ್ನಲಾಗಿದೆ. ಸಭೆಯಲ್ಲಿ ಸಚಿವರಾದ ಹೆಚ್.ಸಿ ಮಹದೇವಪ್ಪ, ಕೆ.ವೆಂಕಟೇಶ್, ಕೆ.ಎನ್ ರಾಜಣ್ಣ, ದಿನೇಶ್ ಗುಂಡೂರಾವ್, ಬೋಸರಾಜು ಸ್ಪೀಕರ್ ಸೇರಿ ಹಲವರು ಭಾಗಿಯಾಗುವ ಸಾಧ್ಯತೆ ಇದೆ.vtu

Key words: CM Siddaramaiah, meeting, MLAs, ministers