ಬೆಂಗಳೂರು,ಆಗಸ್ಟ್,31,2026 (www.justkannada.in): ಕೆಪಿಎಸ್ ಸಿ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಆಗಿ ಸಂಪೂರ್ಣ ವರದಿ ಬರುವವರೆಗೆ ನಾನು ಮಾತನಾಡಲ್ಲ. ಕಾಲವೇ ಉತ್ತರ ಕೊಡುತ್ತದೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ತನಿಖೆ ವಿಚಾರವಾಗಿ ಮಾತನಾಡಲ್ಲ. ಪ್ರಕರಣದಲ್ಲಿ ಯಾರ್ಯಾರನ್ನು ಅರೆಸ್ಟ್ ಮಾಡಿದ್ದಾರೋ ಗೊತ್ತಿಲ್ಲ. ಯಾರ್ಯಾರು ಭಾಗಿಯಾಗಿದ್ದಾರೂ ಅವರನ್ನ ಬಂಧಿಸುತ್ತಾರೆ. ಕೆಪಿಎಸ್ ಸಿ ಅಧ್ಯಕ್ಷರನ್ನ ನೇಮಕ ಮಾಡಿದ್ದು ಯಾರು? ಸಿಎಂ ಆಗಿ ಸಂಪೂರ್ಣವರದಿ ಬರುವವರೆಗೆ ಮಾತನಾಡಲ್ಲ. ಕಾಲವೇ ಉತ್ತರ ಕೊಡುತ್ತೆ ಎಂದರು.
ನೇಪಾಳ ಪ್ರವಾಹದಲ್ಲಿ ಕನ್ನಡಿಗರಿ ಸಿಲುಕಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್, 14 ಜನ ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ. ನೇಪಾಳಕ್ಕೆ ಹೋಗಿದ್ದ ಒಂದು ತಂಡ ಸಂಪರ್ಕಕ್ಕೆ ಸಿಕ್ಕಿಲ್ಲ. ಕೇಂದ್ರ ವಿದೇಶಾಂಗ ಸಚಿವಾಲಯ ಜೊತೆ ಮಾತನಾಡಿದ್ದೇವೆ. ನಮ್ಮ ಅಧಿಕಾರಿಗಳನ್ನ ಕಳುಹಿಸಿಕೊಟ್ಟಿದ್ದೇವೆ ಎಂದರು.
Key words: KPSC scam,, CM, DK Shivakumar







