Monday, August 31, 2026

BDA Apartments

Home Front Page ಇಸ್ಲಾಂ ಧರ್ಮವೇ ಶ್ರೇಷ್ಟ ಎಂದಿದ್ದ ಸಚಿವ ಬಸವರಾಜ ರಾಯರೆಡ್ಡಿ ಯುಟರ್ನ್

ಇಸ್ಲಾಂ ಧರ್ಮವೇ ಶ್ರೇಷ್ಟ ಎಂದಿದ್ದ ಸಚಿವ ಬಸವರಾಜ ರಾಯರೆಡ್ಡಿ ಯುಟರ್ನ್

ಕೊಪ್ಪಳ,ಆಗಸ್ಟ್,31,2026 (www.justkannada.in):  ಎಲ್ಲಾ ಧರ್ಮಗಳಿಗಿಂತಲೂ ಇಸ್ಲಾಂ ಧರ್ಮವೇ ಶ್ರೇಷ್ಠ ಎಂದು ಹೇಳಿಕೆ ನೀಡಿದ್ದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಇದೀಗ ಉಲ್ಟಾ ಹೊಡೆದಿದ್ದಾರೆ.

ಇದೀಗ ಮಾಧ್ಯಮಗಳ ಜೊತೆ ಮಾತನಾಡಿರುವ ಸಚಿವ ಬಸವರಾಜ ರಾಯರೆಡ್ಡಿ ಶರಣ ತತ್ವ ಈಸ್ ಬೆಸ್ಟ್ ಎಂದು ಹೇಳಿಕೆ ನೀಡಿದ್ದಾರೆ. ಇಸ್ಲಾಂ ಧರ್ಮದಲ್ಲಿ ಶ್ರೇಷ್ಠ ವಿಚಾರವಿದೆ. ಆದರೆ ಬೇರೆ ಧರ್ಮ ಕಡಿಮೆ ಎಂದು ನಾನು ಹೇಳಿಲ್ಲ.  ನನಗೆ ಯಾವುದೇ ಧರ್ಮವಿಲ್ಲ, ಯಾವುದೇ ಜಾತಿ ಇಲ್ಲ ಎಂದು ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.

ನಿನ್ನೆ ಮಾತನಾಡಿದ ಸಚಿವ ಬಸವರಾಜ ರಾಯರೆಡ್ಡಿ, ಬೇರೆ ಧರ್ಮಗಳಿಗಿಂತಲೂ ಇಸ್ಲಾಂ ಧರ್ಮವೇ ಶ್ರೇಷ್ಠ. ಮಠಮಾನ್ಯಗಳಿಗೆ ಜಾಸ್ತಿ ಹೋಗಬಾರದು. ಮಠ ದೇವಸ್ಥಾನಗಳಿಗೆ ನಾನು ಹೋಗುವುದಿಲ್ಲ ಎಂದು ಹೇಳಿದ್ದರು.

Key words: Minister, Basavaraja Rayareddy, Islam. best religion, U-turn