ಇಂದು ನೆಲಗುಳಿಯ ಫಾರಂ ಹೌಸ್ ನಲ್ಲಿ ಚಿರು 11ನೇ ದಿನದ ಕಾರ್ಯ

ಬೆಂಗಳೂರು, ಜೂನ್ 17, 2020 (www.justkannada.in): ಚಿರಂಜೀವಿ ಸರ್ಜಾ ಹನ್ನೊಂದನೇ ದಿನದ ಕಾರ್ಯಕ್ರಮ ಇಂದು ನೆಲಗುಳಿಯ ಫಾರಂ ಹೌಸ್ ನಲ್ಲಿ ನಡೆಯಲಿದೆ.

ಚಿರು ಸರ್ಜಾ ಅಂತಿಮ ಕಾರ್ಯದಲ್ಲಿ ಸಾಕಷ್ಟು ಜನ ಸೇರಿದ್ದರು. ಹೀಗಾಗಿ ಸಾಮಾಜಿಕ ಅಂತರವನ್ನೂ ಕಾಯ್ದುಕೊಂಡಿರಲಿಲ್ಲ. ಆದರೆ ಈ ಬಾರಿ ಹೀಗಾಗದಂತೆ ಕುಟುಂಬವರ್ಗ ನೋಡಿಕೊಂಡಿದೆ.

ಇದಕ್ಕಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಆಹ್ವಾನವಿದ್ದರೂ ಕ್ಯಾಮರಾ ತೆಗೆದುಕೊಂಡು ಬಾರದಂತೆ ಅರ್ಜುನ್ ಸರ್ಜಾ ಮನವಿ ಮಾಡಿದ್ದಾರೆ. ಇಂದಿನ ದಿನದ ಕಾರ್ಯಕ್ರಮದಲ್ಲಿ ಕೇವಲ ಕುಟುಂಬಸ್ಥರು ಮತ್ತು ಆಪ್ತರಿಗಷ್ಟೇ ಅವಕಾಶ ನೀಡಲಾಗಿದೆ.