ರಾಜ್ಯ ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಆಡಳಿತಾಧಿಕಾರಿ ನೇಮಿಸುವಂತೆ ಸಿ.ಜಿ ಗಂಗಾಧರ್ ಗೌಡ ಆಗ್ರಹ

ಬೆಂಗಳೂರು,ಜುಲೈ,3,2021(www.justkannada.in): ರಾಜ್ಯ ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಆಡಳಿತಾಧಿಕಾರಿ  ನೇಮಿಸುವಂತೆ ನಾಡಪ್ರಭು ಕೆಂಪೇಗೌಡರ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಸಿ ಜಿ ಗಂಗಾಧರ್ ಗೌಡ ಆಗ್ರಹಿಸಿದ್ದಾರೆ.jk

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ  ಸಿ.ಜಿ ಗಂಗಾಧರ್ ಗೌಡ ಅವರು, ಒಕ್ಕಲಿಗರ ಪ್ರಾಧಿಕಾರ ಆದೇಶದೊಂದಿಗೆ ರೂ 500ಕೋಟಿಗಳನ್ನು ಘೋಷಣೆ ಮಾಡಲಾಗಿತ್ತು. ಆದರೆ ಈ ಮೊತ್ತವು ರಾಜ್ಯಾದ್ಯಂತ ಜಿಲ್ಲಾವಾರು ಮತ್ತು ಇಲಾಖೆಗಳಿಗೆ ಹಂಚಿಕೆಯಾಗಿಲ್ಲ ಇದು ಪ್ರಾಧಿಕಾರದ ಅಧಿಕಾರಿಗಳ ನೇಮಕ ವಾಗಿರದ ಹಿನ್ನೆಲೆ ವಿಳಂಬವಾಗುತ್ತಿದೆ .ಆದ್ದರಿಂದ ಘೋಷಣೆಯಾಗಿರುವ ಮೊತ್ತ  ಸಮುದಾಯದ ಅಭಿವೃದ್ಧಿಗೆ ವಿನಿಯೋಗವಾಗಬೇಕು ಆದ್ದರಿಂದ ಈ ಕೂಡಲೇ ಆಡಳಿತಾಧಿಕಾರಿ ಮತ್ತು ಪದಾಧಿಕಾರಿಗಳ ನೇಮಕ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Key words: CG Gangadhar Gowda-demands – appointment – administrative officer – state’s vokkaliga development authority