ಜ.4 ರಂದು ನಂಜನಗೂಡು ಬಂದ್ ಗೆ ಕರೆ.

ಮೈಸೂರು,ಜನವರಿ,2,2024(www.justkannada.in): ಅಂದಕಾಸುರ ಸಂಹಾರ ವೇಳೆ  ಶ್ರೀಕಂಠೇಶ್ವರ ವಿಗ್ರಹದ ಮೇಲೆ ನೀರೆರಚಿದ ಪ್ರಕರಣವನ್ನು ಖಂಡಿಸಿ ಜನವರಿ 4ರಂದು ಮೈಸೂರು ಜಿಲ್ಲೆ ನಂಜನಗೂಡು ಬಂದ್ ಗೆ ಕರೆ ನೀಡಲಾಗಿದೆ.

ಶ್ರೀಕಂಠೇಶ್ವರನ ಭಕ್ತರು ನಂಜನಗೂಡು  ಬಂದ್ ಗೆ ಕರೆ ನೀಡಿದ್ದಾರೆ. ಇತ್ತೀಚೆಗೆ ನಂಜನಗೂಡಿನಲ್ಲಿ ಅಂದಕಾಸುರ ಸಂಹಾರದ ವೇಳೆ ಶ್ರೀಕಂಠೇಶ್ವರ ವಿಗ್ರಹದ ಮೇಲೆ ನೀರೆರಚಿದ ಪ್ರಕರಣ ನಡೆದಿತ್ತು. ಘಟನೆಯ ಬಗ್ಗೆ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಇದೀಗ ನಂಜನಗೂಡು ಬಂದ್ ಗೆ ಕರೆ ನೀಡಲಾಗಿದ್ದು ಬಂದ್ ಯಶಸ್ವಿಗೊಳಿಸುವಂತೆ ಭಕ್ತರು ಮನವಿ ಮಾಡಿದ್ದಾರೆ.

Key words: Call – Nanjangudu-bandh-Jan 4.