Friday, August 7, 2026

BDA Apartments

Home Front Page ರಾಜ್ಯವನ್ನ ಭ್ರಷ್ಟಾಚಾರದಲ್ಲಿ ನಂ.1ಗೆ ತಂದ ಕೀರ್ತಿ ಸಿಎಂ ಸಿದ್ದರಾಮಯ್ಯಗೆ ಸಲ್ಲುತ್ತೆ- ಬಿವೈ ವಿಜಯೇಂದ್ರ

ರಾಜ್ಯವನ್ನ ಭ್ರಷ್ಟಾಚಾರದಲ್ಲಿ ನಂ.1ಗೆ ತಂದ ಕೀರ್ತಿ ಸಿಎಂ ಸಿದ್ದರಾಮಯ್ಯಗೆ ಸಲ್ಲುತ್ತೆ- ಬಿವೈ ವಿಜಯೇಂದ್ರ

ಉಡುಪಿ,ಏಪ್ರಿಲ್,10,2025 (www.justkannada.in): ರಾಜ್ಯವನ್ನ ಭ್ರಷ್ಟಾಚಾರದಲ್ಲಿ ನಂ.1ಗೆ ತಲುಪಿಸಿದ ಕೀರ್ತಿ ಸಿಎಂ ಸಿದ್ದರಾಮಯ್ಯಗೆ ಸಲ್ಲುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನುಡಿದರು.

ರಾಜ್ಯದಲ್ಲಿ ಬೆಲೆ ಏರಿಕೆ ವಿರೋಧಿಸಿ ಉಡುಪಿಯಲ್ಲಿ ಜನಾಕ್ರೋಶ ಯಾತ್ರೆ ಕೈಗೊಂಡಿದ್ದು ಈ ವೇಳೆ ಮಾತನಾಡಿದ ಬಿವೈ ವಿಜಯೇಂದ್ರ , ಬಿಜೆಪಿ ಸರ್ಕಾರವಿದ್ದಾಗ ಕರ್ನಾಟಕ ಅಭಿವೃದ್ದಿಯಲ್ಲಿ 2ನೇ ಸ್ಥಾನದಲ್ಲಿತ್ತು.  ಅಭಿವೃದ್ದಿಯಲ್ಲಿ ಗುಜರಾತ್ ನಂತರ ಕರ್ನಾಟಕ 2ನೇ ಸ್ಥಾನದಲ್ಲಿತ್ತು. ಈಗ ಭ್ರಷ್ಟಾಚಾರದಲ್ಲಿ ನಂ1 ತಲುಪಿದೆ ಆದರ ಕೀರ್ತಿ ಸಿಎಂ ಸಿದ್ದರಾಮಯ್ಯರಿಗೆ ಸಲ್ಲುತ್ತದೆ ಎಂದರು.

ಭ್ರಷ್ಟಾಚಾರದಲ್ಲಿ ಕರ್ನಾಟಕ ನಂ.1 ಎಂಬ ಕಾಂಗ್ರೆಸ್ ಶಾಸಕ ರಾಯರೆಡ್ಡಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ, ರಾಯರೆಡ್ಡಿ ಸತ್ಯವನ್ನೇ ಹೇಳಿದ್ದಾರೆ. ರಾಯರೆಡ್ಡಿ ಅವರದ್ದು ದಿಟ್ಟವಾಗಿ ನೇರವಾಗಿ ಮಾತನಾಡುವ ಸ್ವಭಾವ. ವಾಲ್ಮೀಕಿ ನಿಗಮದಲ್ಲಿ ನೂರಾರು ಕೋಟಿ ಹಗರಣ  ಮುಡಾ ಹಗರಣ ನಂತರ ಹೇಳಿದ್ದಾರೆ ಎಂದರು.

Key words: CM Siddaramaiah, state, No. 1, corruption, BY Vijayendra