Sunday, August 2, 2026

BDA Apartments

Home Front Page ವಿಪಕ್ಷಗಳ ಆರೋಪಗಳು ಸುಳ್ಳು ಎಂದು ಜನತಾ ‍ನ್ಯಾಯಲಯದಿಂದ ತೀರ್ಪು- ಸಚಿವ ಭೈರತಿ ಸುರೇಶ್

ವಿಪಕ್ಷಗಳ ಆರೋಪಗಳು ಸುಳ್ಳು ಎಂದು ಜನತಾ ‍ನ್ಯಾಯಲಯದಿಂದ ತೀರ್ಪು- ಸಚಿವ ಭೈರತಿ ಸುರೇಶ್

ಬೆಂಗಳೂರು,ನವೆಂಬರ್,23,2024 (www.justkannada.in):  ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವ ಕುರಿತು ಸಂತಸ ವ್ಯಕ್ತಪಡಿಸಿರುವ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್,  ಸರ್ಕಾರದ ವಿರುದ್ದ ವಿಪಕ್ಷಗಳು ಮಾಡಿದ ಆರೋಪಗಳು ಸುಳ್ಳು ಎಂದು ಜನತಾ ‍ನ್ಯಾಯಲಯ ತೀರ್ಪು ನೀಡಿದೆ ಎಂದಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಚಿವ ಭೈರತಿ ಸುರೇಶ್,  ವಿಪಕ್ಷಗಳು ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಮೇಲೆ ಅಪಾದನೆ ಮಾಡುತ್ತಿದ್ದರು. ಈಗ ಜನತಾ ನ್ಯಾಯಾಲಯ ಒಳ್ಳೆಯ ತೀರ್ಪನ್ನೇ ಕೊಟ್ಟಿದೆ. ನ್ಯಾಯಯುತವಾಗಿ ಸಿಎಂ ಸೈಟ್  ತೆಗೆದುಕೊಂಡಿದ್ದಾರೆ. ಹೀಗಾಗಿ ಬಿಜೆಪಿ ಅವರ ಆರೋಪ ಸುಳ್ಳು ಎಂದು ಜನ ತೀರ್ಪು ಕೊಟ್ಟಿದ್ದಾರೆ ಎಂದರು.

ಕಾಂಗ್ರೆಸ್ ಗೆ ಆಶೀರ್ವಾದಿಸಿದವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರೆ ಎಂದರು.

Key words: By-election, Janata Court, Minister, Bhairati Suresh