ಯತ್ನಾಳ್ ಬಳಿ ಬಿಜೆಪಿಯವರ ವೀಕ್ನೆಸ್ ಇದೆ: ಹೀಗಾಗಿ ಶಿಸ್ತುಕ್ರಮ ಜರುಗಿಸುತ್ತಿಲ್ಲ- ಸಚಿವ ಎಂ.ಬಿ ಪಾಟೀಲ್ ಲೇವಡಿ.

ಬೆಂಗಳೂರು,ಡಿಸೆಂಬರ್,29,2023(www.justkannada.in):  ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಳಿ ಬಿಜೆಪಿಯವರ ಎಲ್ಲಾ ವೀಕ್ನೆಸ್ ಇದೆ. ಹೀಗಾಗಿ ಬಿಜೆಪಿಯವರು ಯತ್ನಾಳ್ ವಿರುದ್ದ ಶಿಸ್ತುಕ್ರಮ ಜರುಗಿಸುತ್ತಿಲ್ಲ ಅನ್ನಿಸುತ್ತಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಲೇವಡಿ ಮಾಡಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೂ ಕಾಂಗ್ರೆಸ್ ಗೂ ಯಾವುದೇ ಸಂಬಂಧವಿಲ್ಲ. ಯತ್ನಾಳ್ ಕಾಂಗ್ರೆಸ್ ನ ಏಜೆಂಟ್ ಅಲ್ಲ.  ಯತ್ನಾಳ್ ಹಿಂದಿನಿಂದಲೂ ಹೇಳುತ್ತಾ ಬಂದಿರುವುದು ಎಲ್ಲವೂ ಸತ್ಯ.   ಹೀಗಾಗಿ ಬಿಜೆಪಿ  ಯತ್ನಾಳ್ ವಿರುದ್ದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಯತ್ನಾಳ್ ಬಳಿ ಎಲ್ಲೂ ದಾಖಲೆ ಇದ್ದಿರಬಹುದು . ಹೀಗಾಗಿ ಬಿಜೆಪಿಗೆ ಯತ್ನಾಳ್ ಕಂಡರೇ ಭಯ. ಯತ್ನಾಳ್ ಆರೋಪದ ಬಗ್ಗೆ ಸರ್ಕಾರವೂ ತನಿಖೆ ನಡೆಸುತ್ತದೆ. ಗುತ್ತಿಗೆದಾರ, ಅಸೋಸಿಯೇಷನ್ ಆರೋಪ ಸೇರಿ ಎಲ್ಲವನ್ನೂ ತನಿಖೆ ಮಾಡುತ್ತೇವೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

Key words: BJP -weakness – with- Yatnal- Minister- MB Patil