ಬೆಂಗಳೂರು,ಆಗಸ್ಟ್,5,2026 (www.justkannada.in): ವಾಲ್ಮೀಕಿ ನಿಗಮದ ಹಗರಣದಲ್ಲಿ ಕಳಂಕಿತರಾಗಿದ್ದ ಬಿ.ನಾಗೇಂದ್ರಗೆ ಸಚಿವ ಸ್ಥಾನ ನೀಡಲಾಗಿದೆ. ಅವರ ರಾಜೀನಾಮೆ ಪಡೆಯದೇ ಅಧಿವೇಶನದಲ್ಲಿ ಸದನ ನಡೆಯಲು ನಾವು ಬಿಡುವುದಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಕಳಂಕಿತರಿಗೆ ಹೆಚ್ಚು ಹಣ ನೀಡಿದವರಿಗೆ ಸಚಿವ ಸ್ಥಾನ ನೀಡಲಾಗಿದೆ. ವಾಲ್ಮೀಕಿ ನಿಗಮ ಹಗರಣದ ಕಳಂಕಿತರಾಗಿದ್ದ ನಾಗೇಂದ್ರಗೆ ಸ್ಥಾನ ನೀಡಲಾಗಿದೆ. ಹಗರಣದ ಬಗ್ಗೆ ನಾಗೇಂದ್ರ ಎಲ್ಲರ ಹೆಸರು ಹೇಳುತ್ತೇನೆ ಅಂತ ಹೇಳಿದ್ರಂತೆ. ಹೀಗಾಗಿ ನಾಗೇಂದ್ರರನ್ನು ಸಚಿವರನ್ನಾಗಿ ಮಾಡಲಾಗಿದೆ ಎಂದರು.
ಇನ್ನೊಬ್ಬರು ನನ್ನ ಮರ್ಯಾದೆ ಪ್ರಶ್ನೆ ಅಂತಾ ಹೆಚ್ಚು ಹಣ ಕೊಟ್ಟಿದ್ದಾರಂತೆ. ಹೆಚ್ಚು ಹಣ ನೀಡಿದವರಿಗೆ ಸಚಿವ ಸ್ಥಾನ ನೀಡಲಾಗಿದೆ. ಈ ವಿಚಾರದಲ್ಲಿ ಹಿಂದೆ ನಾವು ಮಾಡಿದ್ದ ಆರೋಪ ಈಗ ಸಾಬೀತಾಗಿದೆ ಆಡಿಯೋದಲ್ಲಿ ಮಾತಾಡಿರುವುದು ತಿಮ್ಮಾಪುರ ಮತ್ತು ನಂಜಯ್ಯನಮಠ ಇಬ್ಬರೂ ಕಾರಿನಲ್ಲಿ ಮಾತಾಡಿರೋ ಆಡಿಯೋ ರೆಕಾರ್ಡ್ ಮಾಡಲಾಗಿದೆ ಎಂದರು.
ಈಗ ನಾಗೇಂದ್ರ ದೆಹಲಿಗೆ ಹೋಗದಂತೆ ಕೊರ್ಟ್ ಆದೇಶಿಸಿದೆ. ಇಂತಹ ಕಳಂಕಿತರು ಸಂಪುಟದಲ್ಲಿ ಇರಲು ಸಾಧ್ಯವೇ ಇಲ್ಲ .ನಾಗೇಂದ್ರ ರಾಜೀನಾಮೆ ಪಡೆಯುವವರೆಗೆ ಮತ್ತೆ ಹೋರಾಟ ಮಾಡುತ್ತೇವೆ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
Key words: resignation, Minister, B. Nagendra, Chalavadi Narayanaswamy







