ಬಿಡದಿ ಟೌನ್ ಶಿಪ್ ವಿರುದ್ದ ಆಕ್ರೋಶ: ಮಹಿಳೆಯರಿಂದ ಅಧಿಕಾರಿಗಳಿಗೆ ಪೊರಕೆ ಸೇವೆ, ಕಾರಿನ ಗ್ಲಾಸ್ ಪೀಸ್ ಪೀಸ್

ರಾಮನಗರ,ಜುಲೈ,13,2026 (www.justkannada.in):  ರಾಮನಗರದ ಬಿಡದಿ ಟೌನ್ ಶಿಪ್ ವಿರುದ್ದ ಆಕ್ರೋಶ ತೀವ್ರಗೊಂಡಿದ್ದು  ಸಿಡಿದೆದ್ದ ಮಹಿಳೆಯರು ಸರ್ವೇ ಕಾರ್ಯಕ್ಕೆ ಬಂದಿದ್ದ ಅಧಿಕಾರಿಗಳಿಗೆ ಪೊರಕೆ ಸೇವೆ ಮಾಡಿರುವ ಘಟನೆ ನಡೆದಿದೆ.

ರಾಮನಗರದ  ಮಂಡಲಹಳ್ಳಿಯಲ್ಲಿ ಈ ಘಟನೆ ನಡೆದಿದ್ದು ಪೊಲೀಸ್ ಭದ್ರತೆಯೊಂದಿಗೆ ಬಿಡದಿ ಟೌನ್ ಶಿಪ್ ಸರ್ವೆಕಾರ್ಯಕ್ಕೆ ಅಧಿಕಾರಿಗಳು ಎರಡು ಕಾರಿನಲ್ಲಿ ಆಗಮಿಸಿದ್ದರು ಎನ್ನಲಾಗಿದೆ. ಈ ವೇಳೆ ಮಹಿಳೆಯರು ಅಧಿಕಾರಿಗಳಿಗೆ ಕಾರಿಗೆ ಪೊರಕೆಯಿಂದ ಹೊಡೆದಿದ್ದಾರೆ. ಅಲ್ಲದೆ ಇಟ್ಟಿಗೆ ಕಲ್ಲುಗಳಿಂದಲೂ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಎರಡು ಕಾರುಗಳನ್ನ ಜಖಂಗೊಳಿಸಿ ಅಧಿಕಾರಿಗಳಿಗೆ ಹೊಡೆದಿದ್ದು,  ಮಹಿಳೆಯರ ಆಕ್ರೋಶಕ್ಕೆ ಕಾರುಗಳ ಗಾಜು ಪುಡಿ ಪುಡಿಯಾಗಿದೆ.  ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Key words: Bidadi Township, Women, officers, break, car, Outrage,