ಆಪರೇಷನ್ ಕಮಲವೇ ಬಿಜೆಪಿಗೆ ಮುಳುವು ಎಂದಿದ್ದ ಕೆ.ಎಸ್ ಈಶ್ವರಪ್ಪಗೆ ಬಿ.ಸಿ ಪಾಟೀಲ್ ಟಾಂಗ್

ಬೆಂಗಳೂರು,ಜೂನ್,26,2023(www.justkannada.in):  ಕಾಂಗ್ರೆಸ್ ನಿಂದ ಬಂದವರಿಂದ ಬಿಜೆಪಿಯಲ್ಲಿ ಶಿಸ್ತು ಕಡಿಮೆಯಾಗಿದೆ. ಆಪರೇಷನ್ ಕಮಲವೇ ಬಿಜೆಪಿಗೆ ಮುಳುವಾಯಿತು ಎಂದು ಹೇಳಿಕೆ ನೀಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪಗೆ ಮಾಜಿ ಸಚಿವ ಬಿ.ಸಿ ಪಾಟೀಲ್ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಬಿ.ಸಿ ಪಾಟೀಲ್,  ಕಾಂಗ್ರೆಸ್ ನಿಂದ ಬಂದವರು ಯಾರೂ ಅಶಿಸ್ತು ತೋರಿಸಿಲ್ಲ. ಈ ಕುರಿತ ಈಶ್ವರಪ್ಪ ಹೇಳಿಕೆ ಕೇವಲ ಹಾಸ್ಯಸ್ಪದ. ಕೆ.ಎಸ್ ಈಶ್ವರಪ್ಪ ಹೇಳಿಕೆಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ರಾಜ್ಯದಲ್ಲಿ ನಮ್ಮಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿತ್ತು ಎಂದು ಹೇಳಿದರು.

Key words: BC Patil – KS Eshwarappa – Operation Kamala- BJP.