Sunday, August 2, 2026

BDA Apartments

Home Front Page ಸೋಮವಾರ ಸಂಪುಟ ರಚನೆ ಸಾಧ್ಯತೆ: 5 ಸಾವಿರ ಕೋಟಿ ಆರಂಭಿಕ ನೆರವು ಕೇಳಿದ್ದೇವೆ- ಸಿಎಂ ಬಿಎಸ್...

ಸೋಮವಾರ ಸಂಪುಟ ರಚನೆ ಸಾಧ್ಯತೆ: 5 ಸಾವಿರ ಕೋಟಿ ಆರಂಭಿಕ ನೆರವು ಕೇಳಿದ್ದೇವೆ- ಸಿಎಂ ಬಿಎಸ್ ಯಡಿಯೂರಪ್ಪ  ಹೇಳಿಕೆ

ನವದೆಹಲಿ,ಆ,17,2019(www.justkannada.in):  ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದ ನಲುಗಿರುವ ನೆರೆ ಸಂತ್ರಸ್ತರ ಪರಿಹಾರ ಕಾರ್ಯಕ್ಕಾಗಿ 5 ಸಾವಿರ ಕೋಟಿ ಆರಂಭಿಕ ನೆರವು ಕೇಳಿದ್ದೇವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

ಇಂದು ನವದೆಹಲಿಯಲ್ಲಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ನೆರೆ ಪ್ರವಾಹದಿಂದ ರಾಜ್ಯದಲ್ಲಿ 45 ಸಾವಿರ ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ. ಹೀಗಾಗಿ ಪ್ರಧಾನಿ ಮೋದಿ ಅವರನ್ನ ಭೇಟಿ ಮಾಡಿ ನೆರೆ ಪರಿಹಾರದ ಬಗ್ಗೆ ಚರ್ಚಿಸಿದ್ದೇನೆ. ಬಹಳ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಇದೆ. ಹೀಗಾಗಿ ಎಲ್ಲಾ ರಾಜ್ಯಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬಹುದು ಎಂದು ತಿಳಿಸಿದರು.

ಸಚಿವ ಸಂಪುಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಬಿಎಸ್ ಯಡಿಯೂರಪ್ಪ,  ಸಚಿವ ಸಂಪುಟ ರಚನೆಗೆ ಬಹುತೇಕ ಗ್ರೀನ್ ಸಿಗ್ನಲ್ ನೀಡಲಿದ್ದಾರೆ. ಸೋಮವಾರ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದರು. ಇಂದು ಸಂಜೆ 5 ಗಂಟೆಗೆ ಅಮಿತ್ ಶಾ – ಸಿಎಂ ಬಿಎಸ್ ಯಡಿಯೂರಪ್ಪ ಅವರ ಭೇಟಿ ನಿಗದಿಯಾಗಿತ್ತು. ಆದರೆ, ಸಂಜೆ 6ಗಂಟೆಗೆ ಭೇಟಿಯನ್ನು ಮುಂದೂಡಲಾಗಿದೆ.

Key words: We -asked – initial- Relief Fund-Rs 5,000 crore- pm modi-CM BS Yeddyurappa