Saturday, August 1, 2026

BDA Apartments

Home Front Page ರಾಜ್ಯದಲ್ಲಿನ ಇಂಥ ಸ್ಥಿತಿಗೆ ಸಿದ್ಧರಾಮಯ್ಯನೇ ಕಾರಣ- ಮಾಜಿ ಸಿಎಂ ಹೆಚ್.ಡಿಕೆ ವಾಗ್ದಾಳಿ.

ರಾಜ್ಯದಲ್ಲಿನ ಇಂಥ ಸ್ಥಿತಿಗೆ ಸಿದ್ಧರಾಮಯ್ಯನೇ ಕಾರಣ- ಮಾಜಿ ಸಿಎಂ ಹೆಚ್.ಡಿಕೆ ವಾಗ್ದಾಳಿ.

ಕೋಲಾರ,ಮಾರ್ಚ್,27,2022(www.justkannada.in): ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ಕೋಲಾರದಲ್ಲಿ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ರಾಜ್ಯಕ್ಕೆ ಇಂಥ ಸ್ಥಿತಿ ಬರಬಾರದಿತ್ತು. ಇಂಥ ಸ್ಥಿತಿ ಬರಲು ಸಿದ್ಧರಾಮಯ್ಯ ಕಾರಣ.  ಹಿಜಾಬ್ ವಿವಾದ ಒಂದು ಹಂತದಲ್ಲಿತ್ತು  ಈಗ ಅಂಗಡಿ ತೆರವುಗೊಳಿಸುವ ಕೆಲಸ ಶುರುವಾಗಿದೆ.  ರಾಷ್ಟ್ರೀಯ ಪಕ್ಷಗಳು ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಮಕ್ಕಳ ಭವಿಷ್ಯಕ್ಕೆ ಕುತ್ತು ತರುತ್ತಿದ್ದಾರೆ.  ಸಿದ್ಧರಾಮಯ್ಯ ಬಗ್ಗೆ ಮುಸ್ಲಿಂರಿಗೆ ಗೊತ್ತಾಗಿದೆ. ಇನ್ನು ಮುಂದೆ ಅವರ ಆಟ ನಡೆಯಲ್ಲ.  ಬಿಜೆಪಿ 105 ಸೀಟು ಬರಲು ಸಿದ್ಧರಾಮಯ್ಯ ಕಾರಣ ಎಂದು ಕಿಡಿಕಾರಿದರು.

ಹಾಗೆಯೇ ನಾಳೆಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಹಿನ್ನೆಲೆ ಮಾತನಾಡಿದ ಹೆಚ್.ಡಿಕೆ, ಮಕ್ಕಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಪರೀಕ್ಷೆ ಬರೆಯಲು ಮುಕ್ತ ಅವಕಾಶ ನೀಡಬೇಕು ಎಂದರು.

Key words: former CM-HD Kumaraswamy- siddaramaiah-hijab