Sunday, August 23, 2026

BDA Apartments

Home Front Page ಸಗಣಿ, ಗೋ ಮೂತ್ರ ದೇಶದ ಆರ್ಥಿಕತೆ ಬಲಪಡಿಸುತ್ತದೆ ಎಂದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್

ಸಗಣಿ, ಗೋ ಮೂತ್ರ ದೇಶದ ಆರ್ಥಿಕತೆ ಬಲಪಡಿಸುತ್ತದೆ ಎಂದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್

ಬೆಂಗಳೂರು, ನವೆಂಬರ್ 14, 2021 (www.justkannada.in): ಹಸು ಮತ್ತು ಅದರ ಸಗಣಿ, ಮೂತ್ರವು ವ್ಯಕ್ತಿಯ ಆರ್ಥಿಕತೆಯನ್ನು ಬಲಪಡಿಸುತ್ತದೆ ಎಂದಿದ್ದಾರೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್.

ಭಾರತೀಯ ಪಶುವೈದ್ಯಕೀಯ ಸಂಘವು ಆಯೋಜಿಸಿದ್ದ ‘ಶಕ್ತಿ 2021’ ಮಹಿಳಾ ಪಶುವೈದ್ಯರ ಸಮಾವೇಶದಲ್ಲಿ ಮಾತನಾಡಿದ ಅವರು, ಹಸು ಮತ್ತು ಅದರ ಸಗಣಿ, ಮೂತ್ರವು ವ್ಯಕ್ತಿಯ ಆರ್ಥಿಕತೆಯನ್ನು ಬಲಪಡಿಸುತ್ತದೆ ಮತ್ತು ದೇಶವನ್ನು ಆರ್ಥಿಕವಾಗಿ ಸಮರ್ಥವಾಗಿಸುತ್ತದೆ ಎಂದಿದ್ದಾರೆ.

ಸರ್ಕಾರವು ಹಸುಗಳ ಆಶ್ರಯಗಳನ್ನು ಅಭಿವೃದ್ಧಿಪಡಿಸಿದೆ, ಆದರೆ ಅದು ಏಕಾಂಗಿಯಾಗಿ ಕಾರ್ಯನಿರ್ವಹಿಸುವುದಿಲ್ಲ, ಸಮಾಜದ ಸಹಭಾಗಿತ್ವದ ಅಗತ್ಯವಿದೆ ಎಂದು ತಿಳಿಸಿದೆ. ಗೋವು, ಅವುಗಳ ಸಗಣಿ ಮತ್ತು ಮೂತ್ರದ ಮೂಲಕ ನಾವು ನಮ್ಮದೇ ಆರ್ಥಿಕತೆಯನ್ನು ಬಲಪಡಿಸಬಹುದು. ದೇಶವನ್ನು ಆರ್ಥಿಕವಾಗಿ ಸಬಲಗೊಳಿಸಬಹುದು ಎಂದು ಅವರು ಹೇಳಿದರು.