Sunday, September 6, 2026

BDA Apartments

Home Front Page ಮೇಜರ್ ಸರ್ಜರಿ:  ಹಾಲಿ ಕೆಪಿಸಿಸಿ ಸಮಿತಿಯನ್ನೇ ವಿಸರ್ಜಿಸಿದ ಎಐಸಿಸಿ..

ಮೇಜರ್ ಸರ್ಜರಿ:  ಹಾಲಿ ಕೆಪಿಸಿಸಿ ಸಮಿತಿಯನ್ನೇ ವಿಸರ್ಜಿಸಿದ ಎಐಸಿಸಿ..

ಬೆಂಗಳೂರು, ಜೂ.19,2019(www.justkannada.in):  ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸೋಲು ಹಿನ್ನೆಲೆ ಕೆಪಿಸಿಸಿಗೆ ಮೇಜರ್ ಸರ್ಜರಿ ಮಾಡಲಾಗಿದ್ದು, ಹಾಲಿ ಕೆಪಿಸಿಸಿ ಸಮಿತಿಯನ್ನ ಎಐಸಿಸಿ ವಿಸರ್ಜನೆ ಮಾಡಿದೆ.

ಅಧ್ಯಕ್ಷರು, ಕಾರ್ಯಾಧ್ಯಕ್ಷರನ್ನು ಉಳಿಸಿಕೊಂಡು ಕೆಪಿಸಿಸಿಯ ಎಲ್ಲಾ ಪದಾಧಿಕಾರಿಗಳನ್ನು ಜವಾಬ್ದಾರಿಯಿಂದ ಬಿಡುಗಡೆಗೊಳಿಸಲಾಗಿದೆ.  170ಕ್ಕೂ ಹೆಚ್ಚು ಕಾರ್ಯದರ್ಶಿಗಳು ಸ್ಥಾನ ಕಳೆದುಕೊಂಡಿದ್ದಾರೆ.   ಹೊಸದಾಗಿ ಪಕ್ಷವನ್ನು ಪುನಾರಚಿಸಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ.

ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರ ಆದೇಶದ ಮೇರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಇಂದು ಮಧ್ಯಾಹ್ನ ಮಹತ್ವದ ಆದೇಶ ಹೊರಡಿಸಿದ್ದು, ಕೆಪಿಸಿಸಿ ಉಪಾಧ್ಯಕ್ಷರು, ಪ್ರಧಾನಕಾರ್ಯದರ್ಶಿ, ಕಾರ್ಯದರ್ಶಿಗಳನ್ನು ಜವಾಬ್ದಾರಿಯಿಂದ ಬಿಡುಗಡೆಗೊಳಿಸಲಾಗಿದೆ.

ಈ ಮೂಲಕ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಮ್ಮ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ಆದರೆ ಕೆಪಿಸಿಸಿ ಉಪಾಧ್ಯಕ್ಷರಾದ ಬಿಎಲ್ ಶಂಕರ್ ಕಾರ್ಯದರ್ಶಿಗಳಾದ ರಾಣಿಸತೀಶ್, ಮೋಟಮ್ಮ, ಬಿ.ಕೆ ಚಂದ್ರಶೇಖರ್, ಸಿ ಹನುಮಂತಯ್ಯ ಸೇರಿ ಹಲವು ಮುಖಂಡರು ಸ್ಥಾನ ಕಳೆದುಕೊಂಡಿದ್ದಾರೆ.

 

Key words: AICC -dismisses – KPCC -committee