Friday, July 31, 2026

BDA Apartments

Home Front Page ತಲೆ ಮೇಲೆ ಕಲ್ಲು, ಹೆಗಲಿಗೆ ಗುದ್ದಲಿ, ಪಿಕಾಸಿ ಹಿಡಿದು ರೈತ ವಿರೋಧಿ ಮಸೂದೆಗಳ ವಿರುದ್ಧ ಪ್ರತಿಭಟನೆ...

ತಲೆ ಮೇಲೆ ಕಲ್ಲು, ಹೆಗಲಿಗೆ ಗುದ್ದಲಿ, ಪಿಕಾಸಿ ಹಿಡಿದು ರೈತ ವಿರೋಧಿ ಮಸೂದೆಗಳ ವಿರುದ್ಧ ಪ್ರತಿಭಟನೆ  

ಮೈಸೂರು,ಸೆಪ್ಟೆಂಬರ್,28,2020 (www.justkannada.in) : ತಲೆಯ ಮೇಲೆ ಕಲ್ಲು, ಹೆಗಲಿಗೆ ಗುದ್ದಲಿ, ಪಿಕಾಸಿಯನ್ನು ಹಾಕಿಕೊಂಡು ಬೆಂಗಳೂರಿಗೆ ತೆರಳುವ ಬಸ್ ತಡೆದು ರೈತರು ಸೇರಿದಂತೆ ವಿವಿಧ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿದರು.

jk-logo-justkannada-logo

ರಾಜ್ಯ ರೈತ ಸಂಘ, ಹಸಿರು ಸೇನೆ, ಸಿಐಟಿಯು, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಸಂಘಟನೆ ಸದಸ್ಯರು ನಿಲ್ದಾಣದಲ್ಲಿದ್ದ ಎರಡು ಬಸ್ ಗಳನ್ನು ತಡೆದು ಆಕ್ರೋಶವ್ಯಕ್ತಪಡಿಸಿದರು.

 Stones-head-heels-shoulders-picasies-protest

ರೈತ ವಿರೋಧಿ ಮಸೂದೆಗಳ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೊಷಣೆ ಕೂಗಿದರು. ಈ ಸಂದರ್ಭ ಪ್ರತಿಭಟನಕಾರರ ಪ್ರತಿರೋಧದ ನಡುವೆಯೂ ಪೊಲೀಸರು ಒಂದು ಬಸ್ ಕಳುಹಿಸಿದರು. ಮತ್ತೊಂದು ಬಸ್ ಅನ್ನು ಮುಂದೆ ಚಲಿಸದಂತೆ ಕುಳಿತು ಪ್ರತಿಭಟನಕಾರರು ವಿವಿಧ ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು.

key words : Stones-head-heels-shoulders-picasies-protest