ಮಂಗಳೂರು,ಜೂನ್,23,2026 (www.justkannada.in): ಬಿಡದಿ ಟೌನ್ ಶಿಪ್ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನಡುವೆ ವಾಗ್ಯುದ್ಧಗಳು ನಡೆಯುತ್ತಿದ್ದು ಈ ವಿಚಾರ ಕುರಿತು ಆರೋಗ್ಯ ಇಲಾಖೆ ಸಚಿವ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಯುಟಿ ಖಾದರ್, ಬಿಡದಿ ಟೌನ್ ಶಿಪ್ ನಿರ್ಮಾಣಕ್ಕೆ ಅಧಿಸೂಚನೆ ಮಾಡಿದ್ದು ಯಾರೆಂದು ಜನರಿಗೆ ತಿಳಿಸಲಿ. ಅಧಿಸೂಚನೆ ಯಾರು ಮಾಡಿದರು ಎಂದು ಜೆಡಿಎಸ್ ಮುಖಂಡರು ಹೇಳಲಿ ಎಂದು ತಿರುಗೇಟು ನೀಡಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದ ಬದಲು ಬಿಡದಿಯ ಬೈರಮಂಗಲಕ್ಕೆ ಚರ್ಚೆಗೆ ಬರುವಂತೆ ಸಿಎಂ ಡಿಕೆ ಶಿವಕುಮಾರ್ ಗೆ ಪತ್ರ ಬರೆದ ಹೆಚ್ ಡಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟ ಸಚಿವ ಯುಟಿ ಖಾದರ್, ರಾಜ್ಯದ ಜನರ ಬಗ್ಗೆ ಚರ್ಚಿಸಲೆಂದೇ ವಿಧಾನಸೌಧ ಇರೋದು ಎಂದು ಹೇಳಿದ್ದಾರೆ.
Key words: Bidadi Township, dispute, Minister, UT Khader, HDK







