Saturday, August 29, 2026

BDA Apartments

Home Front Page ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುತ್ತೆ: ಆದ್ರೆ ಡಿಕೆಶಿ ಮುಖ್ಯಮಂತ್ರಿಯಾಗಲ್ಲ-ಆರ್.ಅಶೋಕ್

ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುತ್ತೆ: ಆದ್ರೆ ಡಿಕೆಶಿ ಮುಖ್ಯಮಂತ್ರಿಯಾಗಲ್ಲ-ಆರ್.ಅಶೋಕ್

ಹಾಸನ,ಮೇ,26,2026 (www.justkannada.in): ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುತ್ತದೆ. ಆದರೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಕಾಂಗ್ರೆಸ್ ಹೈಕಮಾಂಡ್ ನಾಯಕರ ಮಾತುಕತೆ ಕುರಿತು ಮಾತನಾಡಿದ ಆರ್.ಅಶೋಕ್,  ಎಲ್ಲರನ್ನೂ ಕರೆದೊಯ್ದು ಒಂದೊಂದು ರೂಮ್ ನಲ್ಲಿ ಕೂಡಿ ಹಾಕಿದ್ದಾರೆ.  ಒಬ್ಬರನೊಬ್ಬರು ಭೇಟಿಯಾಗಲು ಅವಕಾಶವೇ ಇಲ್ಲ. ಸಿಎಂ ಡಿಸಿಎಂ ಒಬ್ಬರ ಮುಖ ಒಬ್ಬರು ನೋಡದಂತೆ ಕೂಡಿ ಹಾಕಿದ್ದಾರೆ.  ಯಾರು ಬರಿ ಕೈಲಿ ಬರ್ತಾರೆ ನೋಡೋಣ ಎಂದರು.

ಡಿಕೆ ಶಿವಕುಮಾರ್ ಗೆ ಭವಿಷ್ಯ ಕಾಣಿಸುತ್ತಿಲ್ಲ ಅಂತಾ ಹೇಳಿದ್ದೀನಲ್ಲ. ಡಿಕೆ  ಶಿವಕುಮಾರ್ ಗೆ ನೂರಕ್ಕೆ ನೂರರಷ್ಟು ಖಾಲಿ ತಟ್ಟೆ.  ರಾಜ್ಯದಲ್ಲಿ ಸಿಎಂ ಬದಲಾವಣೆ ಆಗ್ತಾರೆ ಎಂದು ಹೇಳಿದ್ದೇನೆ.  ಆದರೆ ಡಿಕೆ ಶಿವಕುಮಾರ್  ಸಿಎಂ ಆಗುತ್ತಾರೆ ಎಂದು ಎಲ್ಲೂ ಹೇಳಿಲ್ಲ ಎಂದರು.

ಬಿಜೆಪಿ ಅಧ್ಯಕ್ಷರ ಬದಲಾವಣೆ ವಿಚಾರ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ.  ಇವರನ್ನೇ ಮುಂದುವರೆಸಬಹುದು, ಹೊಸಬರೂ ಬರಬಹುದು.  ಅವರು ಯಾರನ್ನಾದರೂ ನೇಮಕ ಮಾಡಲಿ ಸ್ವೀಕಾರ ಮಾಡುತ್ತೇವೆ. ರಾಜ್ಯಾಧ್ಯಕ್ಷ ಆಯ್ಕೆ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.

Key words:  CM change, Siddaramaiah, DK Shivakumar,  state, R. Ashok