Sunday, August 9, 2026

BDA Apartments

Home Front Page ಬೆಂಗಳೂರಿಗೆ ತಮಿಳುನಾಡಿನ ಯಾವ ಶಾಸಕರೂ ಬಂದಿಲ್ಲ, ನನ್ನ ಸಂಪರ್ಕದಲ್ಲೂ ಇಲ್ಲ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರಿಗೆ ತಮಿಳುನಾಡಿನ ಯಾವ ಶಾಸಕರೂ ಬಂದಿಲ್ಲ, ನನ್ನ ಸಂಪರ್ಕದಲ್ಲೂ ಇಲ್ಲ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಮೇ,9,2026 (www.justkannada.in):  ತಮಿಳುನಾಡಿನ ಕಾಂಗ್ರೆಸ್ ಶಾಸಕರು ಬೆಂಗಳೂರಿನ ರೆಸಾರ್ಟ್ ಬಂದಿರುವ ಬಗ್ಗೆ ವದಂತಿ ಹಿನ್ನೆಲೆ ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಯಾವ ಶಾಸಕರೂ  ರೆಸಾರ್ಟ್ ಗೆ ಬಂದಿಲ್ಲ . ನನಗೆ ಮಾಹಿತಿ ಇಲ್ಲ. ಯಾರೂ ಸಹ ನನ್ನ ಸಂಪರ್ಕದಲ್ಲಿ ಇಲ್ಲ.  ತಮಿಳುನಾಡಿನ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ದುರಸ್ತಿ ಹಿನ್ನೆಲೆ ಈಗಲ್ಟನ್ ರೆಸಾರ್ಟ್ ಮುಚ್ಚಿದೆ ಎಂದಿದ್ದಾರೆ.  ಹೈದರಾಬಾದ್ ಗೆ ಹೋಗಿದ್ದಾರೆ ಅಂತಾ ಮಾಧ್ಯಮದಲ್ಲಿ ನೋಡಿದೆ.  ಹೈಕಮಾಂಢಗ ನಾಯಕರು ನನ್ನ ಜೊತೆ ಏನೂ ಮಾತನಾಡಿಲ್ಲ ಹೈಕಮಾಂಡ್ ನಾಯಕರು ಮಾತನಾಡಿದ್ರೆ  ಸ್ಟ್ಯಾಂಡ್ ತೆಗೆದುಕೊಳ್ಳುತ್ತಿದ್ದೆ. ಇದು ಪಾರ್ಟಿ ನಿರ್ಣಯ ಎಂದರು.

Key words:  Tamil Nadu, MLAs, Bengaluru, DCM,  DK Shivakumar