ಈ ತಿಂಗಳಲ್ಲಿ ಸಚಿವ ಸಂಪುಟ ಪುನಾರಚನೆ – ಸಲೀಂ ಅಹ್ಮದ್

ಹಾವೇರಿ,ಮೇ,8,2026 (www.justkannada.in): ಈ ತಿಂಗಳಲ್ಲಿ ರಾಜ್ಯ ಸಚಿವ ಸಂಪುಟ ಪುನಾರಚನೆ ಆಗಬಹುದು ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಲೀಂ ಅಹ್ಮದ್,  ಸಚಿವ ಸಂಪು ಟ ಪುನಾರಚನೆ ಬಗ್ಗೆ . ಸಿಎಂ ಡಿಸಿಎಂ ಹೈಕಮಾಂಡ್ ನಾಯಕರು ತೀರ್ಮಾನಿಸುತ್ತಾರೆ.  ಅದಷ್ಟು ಬೇಗ ಸಚಿವ ಸಂಫುಟ ಪುನಾರಚನೆ ಆಗುತ್ತದೆ ಚುನಾವಣೆಗಳಲ್ಲಿ ನಾಯಕರು ಬ್ಯುಸಿ ಆಗಿದ್ದರಿಂದ ವಿಳಂಬ ಆಗಿದೆ ಎಂದರು.

ಬಿಜೆಪಿಯವರು ಗ್ಯಾರಂಟಿಗಳನ್ನ ನಿಲ್ಲಿಸಿ ಅಂತ ಹೇಳಲಿ ನೋಡೋಣ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಜೊತಗೆ ಅಭಿವೃದ್ದಿಯಾಗುತ್ತಿದೆ. ಮುಂದೆಯೂ ರಾಜ್ಯದ ಜನರು ಕಾಂಗ್ರೆಸ್ ಕೈಹಿಡಿಯುತ್ತಾರೆ ಎಂದರು.

Key words: Cabinet, reshuffle, this month, Salim Ahmed