Wednesday, September 9, 2026

BDA Apartments

Home Front Page ಸಿಎಂ ಅಸಹಾಯಕರು ಎನ್ನುವವರೇ ಅಸಹಾಯಕರು- ಸಚಿವ ರಾಮಲಿಂಗರೆಡ್ಡಿ

ಸಿಎಂ ಅಸಹಾಯಕರು ಎನ್ನುವವರೇ ಅಸಹಾಯಕರು- ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಏಪ್ರಿಲ್,23,2026 (www.justkannada.in):  ಸಿಎಂ ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಸಿಎಂ ಸಿದ್ದರಾಮಯ್ಯ ಅಸಹಾಯಕರು ಎನ್ನುವವರೇ ಅಸಹಾಯಕರು ಎಂದು ಟಾಂಗ್ ಕೊಟ್ಟಿದ್ದಾರೆ.

ಸಿಎಂಗೆ ಮಾಟ ಮಂತ್ರ ಮಾಡಿಸಿರಬಹುದು ಎಂಬ ಮಾಜಿ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ ಕುರಿತು ಮಾತನಾಡಿದ  ಸಚಿವ ರಾಮಲಿಂಗರೆಡ್ಡಿ. ಈ ಬಗ್ಗೆ ರಾಜಣ್ಣರನ್ನೇ ಕೇಳಿದರೆ ಒಳ್ಳೇಯದು.  ಸಿಎಂ ಅಸಹಾಯಕರು ಎಂದು ಹೇಳವವರು ಅಸಹಾಯಕರು  ಮಾಟಮಂತ್ರದ ಬಗ್ಗೆ ನನಗೆ ನಂಬಿಕೆ ಇಲ್ಲ ನಾನು ಯಾವುದೇ ಮಾಟ ಮಂತ್ರದ ಬಗ್ಗೆ ಕೇಳಿಲ್ಲ ಎಂದರು.

ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತರ ಟಾರ್ಗೆಟ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ರಾಮಲಿಂಗರೆಡ್ಡಿ,  ನಮ್ಮ ಪಕ್ಷ ವಿಶೇಷವಾಗಿ ಅಲ್ಪಸಂಖ್ಯಾತರ ಪರ ಇದೆ. ಯಾರನ್ನೂ ಟಾರ್ಗೆಟ್ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

Key words:  CM helpless, Statement, Minister, Ramalingareddy