Tuesday, September 8, 2026

BDA Apartments

Home Front Page ಜಮೀರ್ ಜೆಡಿಎಸ್ ಸೇರ್ಪಡೆ ವದಂತಿ ವಿಚಾರ:  ಕೇಂದ್ರ ಸಚಿವ HDK ಗರಂ

ಜಮೀರ್ ಜೆಡಿಎಸ್ ಸೇರ್ಪಡೆ ವದಂತಿ ವಿಚಾರ:  ಕೇಂದ್ರ ಸಚಿವ HDK ಗರಂ

ಹಾಸನ,ಏಪ್ರಿಲ್,23,2026 (www.justkannada.in):  ಸಚಿವ ಜಮೀರ್ ಅಹ್ಮದ್ ಖಾನ್ ಜೆಡಿಎಸ್ ಸೇರ್ಪಡೆಯಾಗುತ್ತಾರೆಯೇ ಎಂಬ ವದಂತಿ ಹಬ್ಬಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಗರಂ ಆಗಿದ್ದಾರೆ.

ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಅಧಿಕಾರಕ್ಕಾಗಿ ಆ ಜನರನ್ನ ಸೇರಿಸಿಕೊಳ್ಳಬೇಕಾಗಿಲ್ಲ.  ಯಾವುದೇ ಕಾರಣಕ್ಕೂ ಆ ವಿಷಯ ನಮ್ಮ ಮುಂದೆ ಹೇಳಬೇಡಿ  ಎಂದರು.

ನಮಗೆ ಅವರ ಅವಶ್ಯಕತೆ ಇಲ್ಲ. ಈಗಾಗಲೇ ಅನುಭವಿಸಿದ್ದೇವೆ  ರಾಜಕೀಯದಲ್ಲಿ ಶಕ್ತಿ ಬರುತ್ತೆ ಅಂತ ಅಂತಹ ವಿಚಾರಕ್ಕೆ ಕೈ ಹಾಕಲ್ಲ. ಬೆಂದ ಮನೆಯಲ್ಲಿ  ಗಳ ಹಿರಿಯುವ ಕೆಲಸಕ್ಕೆ ಕೈ ಹಾಕಲ್ಲ ಎಂದು ಹೆಚ್ ಡಿಕೆ ಹೇಳಿದರು.

Key words: Jameer, joining, JDS, Union Minister, HDK