ಕ್ಯಾಪ್ಟನ್ ಕೂಲ್ ಧೋನಿ ಮತ್ತೆ ಟೀಂ ಇಂಡಿಯಾಕ್ಕೆ ಮರಳುವುದು ಕಷ್ಟ

ಬೆಂಗಳೂರು, ಅಕ್ಟೋಬರ್ 26, 2019 (www.justkannada.in): ಕ್ಯಾಪ್ಟನ್ ಕೂಲ್ ಧೋನಿ ಮತ್ತೆ ಭಾರತ ತಂಡಕ್ಕೆ ಮರಳುವುದು ಕಷ್ಟ ಎಂಬ ಸ್ಪಷ್ಟ ಸುಳಿವು ಸಿಕ್ಕಿದೆ.

ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್‌.ಕೆ. ಪ್ರಸಾದ್‌ ಧೋನಿ ಮತ್ತೆ ಭಾರತ ತಂಡಕ್ಕೆ ಮರಳುವುದು ಕಷ್ಟ ಎಂಬ ಸ್ಪಷ್ಟ ಸುಳಿವು ನೀಡಿದ್ದಾರೆ.

ಧೋನಿಗೆ ನೇರ ಆಯ್ಕೆ ಸಾಧ್ಯವಿಲ್ಲ, ಅವರು ಯುವ ಆಟಗಾರರೊಂದಿಗೆ ಪೈಪೋಟಿ ನಡೆಸಿಯೇ ಮೈದಾನಕ್ಕೆ ಮರಳಬೇಕು ಎಂದು ಅವರು ಹೇಳಿದ ಮಾತು ಇದನ್ನು ಇದನ್ನು ಸ್ಪಷ್ಟಪಡಿಸಿದೆ.