Friday, August 7, 2026

BDA Apartments

Home Front Page ದಾವಣಗೆರೆ-ಬಾಗಲಕೋಟೆಯಲ್ಲಿ ಗೆಲುವು ನಮ್ಮದೇ : ಗೆದ್ದೇ ಗೆಲ್ಲುತ್ತೇವೆ- ಮಾಜಿ ಸಿಎಂ BSY

ದಾವಣಗೆರೆ-ಬಾಗಲಕೋಟೆಯಲ್ಲಿ ಗೆಲುವು ನಮ್ಮದೇ : ಗೆದ್ದೇ ಗೆಲ್ಲುತ್ತೇವೆ- ಮಾಜಿ ಸಿಎಂ BSY

ದಾವಣಗೆರೆ,ಮಾರ್ಚ್,23,2026 (www.justkannada.in):  ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಬಗ್ಗೆ ಜನ ಬೇಸತ್ತಿದ್ದು,  ಹೀಗಾಗಿ ದಾವಣಗೆರೆ-ಬಾಗಲಕೋಟೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರ ನಾಮಪತ್ರ ಸಲ್ಲಿಕೆ ವೇಳೆ ಪಾಲ್ಗೊಂಡು ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ   ಬಿಎಸ್ ಯಡಿಯೂರಪ್ಪ, ಕಾಂಗ್ರೆಸ್ ಸರ್ಕಾರದ ಬಗ್ಗೆ ಜನ ಬೇಸತ್ತಿದ್ದಾರೆ. ಈಗ ತಕ್ಕ ಉತ್ತರ ನೀಡುವ ಅವಕಾಶ ಸಿಕ್ಕಿದೆ ಎಂದರು.

ಜನ ಬೆಂಬಲದ ವಾತಾವರಣ ನೋಡಿದಾಗ ನಮ್ಮ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂಬ ವಿಶ್ವಾಸವಿದೆ ದಾವಣಗೆರೆ-ಬಾಗಲಕೋಟೆಯಲ್ಲಿ ನಮ್ಮದೇ ಗೆಲುವು. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದರು.

Key words: Davangere-Bagalkot, Win, BJP, Former CM, BSY