Thursday, August 6, 2026

BDA Apartments

Home Front Page ಟನಲ್ ರಸ್ತೆ ವಿಚಾರ: ಡಿಕೆ ಶಿವಕುಮಾರ್ ಸರ್ವಾಧಿಕಾರಿ ನಡೆ ಬಿಡಲಿ- ಸಿ.ಟಿ ರವಿ ವಾಗ್ದಾಳಿ

ಟನಲ್ ರಸ್ತೆ ವಿಚಾರ: ಡಿಕೆ ಶಿವಕುಮಾರ್ ಸರ್ವಾಧಿಕಾರಿ ನಡೆ ಬಿಡಲಿ- ಸಿ.ಟಿ ರವಿ ವಾಗ್ದಾಳಿ

ಬೆಂಗಳೂರು,ನವೆಂಬರ್,4,2025 (www.justkannada.in):  ಟನಲ್ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಪ್ರಶ್ನಿಸಿದರೇ ಡಿಕೆ ಶಿವಕುಮಾರ್ ಏಕವಚನದಲ್ಲಿ ಮಾತನಾಡುತ್ತಾರೆ. ಡಿಕೆ ಶಿವಕುಮಾರ್ ಸರ್ವಾಧಿಕಾರಿ ನಡೆ ಬಿಡಲಿ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಹರಿಹಾಯ್ದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಟಿ ರವಿ, ಟನಲ್ ರಸ್ತೆ ಬಗ್ಗೆ ಸರ್ಕಾರದ ಬಳಿ ವೈಜ್ಞಾನಿಕ ವರದಿ ಇಲ್ಲ. ತೇಜಸ್ವಿ ಸೂರ್ಯ ಪ್ರಶ್ನೆಗಳಿಗೆ ಡಿಕೆ ಶಿವಕುಮಾರ್ ಮೊದಲು ಉತ್ತರಿಸಲಿ. ಟನಲ್ ರಸ್ತೆ ಯೋಜನೆಯಿಂದ ವೆಚ್ಚ ದುಬಾರಿ ಪರಿಸರ ಹಾನಿಯಾಗುತ್ತೆ.  ಹೀಗಾಗಿ ತೇಜಸ್ವಿ ಸೂರ್ಯ ವೈಜ್ಞಾನಿಕ ಕಾರಣಗಳನ್ನ ಮುಂದಿಟ್ಟಿದ್ದಾರೆ.

ತೇಜಸ್ವಿ ಸೂರ್ಯ ಪ್ರಶ್ನೆ ಮಾಡಿದರೆ ಡಿಕೆ ಶಿವಕುಮಾರ್ ಏಕವಚನದಲ್ಲಿ ಮಾತನಾಡುತ್ತಾರೆ.  ಡಿಕೆ ಶಿವಕುಮಾರ್ ಸರ್ವಾಧಿಕಾರಿ ನಡೆ ಬಿಡಲಿ . ಟನಲ್ ರಸ್ತೆ ಬಗ್ಗೆ ಸಮಗ್ರ  ಅಧ್ಯಯನ ಮಾಡಿ ಯೋಜನೆ ಮಾಡಲಿ. ಜನರಿಗೆ ಡಿಕೆ ಶಿವಕುಮಾರ್ ಅವಮಾನ ಮಾಡಿದ್ದಾರೆ ಎಂದು ಸಿಟಿ ರವಿ ವಾಗ್ದಾಳಿ ನಡೆಸಿದರು.

Key words: Tunnel road, issue,  DK Shivakumar, CT Ravi