Thursday, August 6, 2026

BDA Apartments

Home Front Page ಗೊ. ರು. ಚನ್ನಬಸಪ್ಪ ಅವರಿಂದ  ಮಂಡ್ಯ ಜಿಲ್ಲಾಧಿಕಾರಿ ಡಾ ಕುಮಾರ ಅವರಿಗೆ ಅಭಿನಂದನೆ

ಗೊ. ರು. ಚನ್ನಬಸಪ್ಪ ಅವರಿಂದ  ಮಂಡ್ಯ ಜಿಲ್ಲಾಧಿಕಾರಿ ಡಾ ಕುಮಾರ ಅವರಿಗೆ ಅಭಿನಂದನೆ

ಮಂಡ್ಯಜನವರಿ,6,2025 (www.justkannada.in):  87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಗೊ. ರು. ಚನ್ನಬಸಪ್ಪ ಅವರು ಸಮ್ಮೇಳನವನ್ನು ಮಂಡ್ಯ ಜಿಲ್ಲೆಯಲ್ಲಿ ಯಶಸ್ವಿಯಾಗಿ ಆಯೋಜಿಸಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ. ಕುಮಾರ ಅವರಿಗೆ ಅಭಿನಂದನೆ ಸಲ್ಲಿಸಿ ಪತ್ರವನ್ನು ಬರೆದಿದ್ದಾರೆ.

ಪ್ರಶಂಸನಾ ಪತ್ರದಲ್ಲಿ ಜಿಲ್ಲಾಧಿಕಾರಿಯೊಬ್ಬರೂ ಸಾಹಿತ್ಯ ಸಮ್ಮೇಳನ ವ್ಯವಸ್ಥೆಯಲ್ಲಿ ಶ್ರಮ ವಹಿಸಿದ್ದುದನ್ನು ಕಂಡದ್ದು ಇದೇ ಮೊದಲು. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಬಗೆಗೆ ಜಿಲ್ಲಾಧಿಕಾರಿಗಳಿಗೆ ಇರುವ ಶ್ರದ್ಧಾಸಕ್ತಿ ನಿಜಕ್ಕೂ ಅಭಿನಂದನೀಯ ಎಂದು ಪತ್ರದಲ್ಲಿ ಬರೆದಿದ್ದಾರೆ‌

ನಾನು ಸಮ್ಮೇಳನದ ಸಲುವಾಗಿ ಮಂಡ್ಯದಲ್ಲಿದ್ದ ನಾಲ್ಕು ದಿನಗಳೂ ತಾವು ನನ್ನ ಬಗೆಗೆ ತೋರಿದ ವಿಶ್ವಾಸಾದರಗಳನ್ನು ನಾನು ಮರೆಯಲಾರೆ. ತಾವು ನೀಡಿದ ಸತ್ಕಾರಕ್ಕೆ ನಾನು ಕೃತಜ್ಞನಾಗಿದ್ದೇನೆ. ಮಂಡ್ಯದಲ್ಲಿ ನಡೆದ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಹಿತ್ಯಾಸಕ್ತರ ಪಾಲುದಾರಿಕೆಯಲ್ಲಿ ಒಂದು ದಾಖಲೆಯನ್ನೇ ಸ್ಥಾಪಿಸಿತು ಎಂದು ಹೇಳಲು ನನಗೆ ಹರ್ಷವೆನಿಸುತ್ತದೆ. ಸಾಮಾನ್ಯವಾಗಿ ಸರ್ಕಾರಿ ಅಧಿಕಾರಿಗಳಿಗೆ ಸಾಹಿತ್ಯ ಸಂಬಂಧವಿರುವುದಿಲ್ಲ ಎಂಬ ಮಾತನ್ನು ಹುಸಿಗೊಳಿಸಿ, ಸಮ್ಮೇಳನದ ಯಶಸ್ಸಿಗಾಗಿ ಶ್ರಮಿಸಿದ ತಮಗೆ ಮತ್ತು ಜಿಲ್ಲಾಡಳಿತದ ಸಮಸ್ತರಿಗೆ ನನ್ನ ಅಭಿನಂದನೆಗಳು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

Go. RU. Channabasappa, congratulates,  Mandya DC Dr. Kumar