Tuesday, August 4, 2026

BDA Apartments

Home Front Page ಪತಿಗೆ ಕಳಂಕ ಬರಬಾರದು ಎಂದು ಮನನೊಂದು ಸೈಟ್ ವಾಪಸ್ – ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಪತಿಗೆ ಕಳಂಕ ಬರಬಾರದು ಎಂದು ಮನನೊಂದು ಸೈಟ್ ವಾಪಸ್ – ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು,ಅಕ್ಟೋಬರ್,1,2024 (www.justkannada.in): 14 ಸೈಟ್ ವಾಪಸ್ ನೀಡುವ  ಬಗ್ಗೆ ನನ್ನ ಜೊತೆ  ಚರ್ಚಿಸಿಲ್ಲ. ಪತಿಗೆ ಕಳಂಕ ಬರಬಾರದು ಎಂದು ಮನನೊಂದು ಸೈಟ್ ವಾಪಸ್ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಮುಡಾ ಹಗರಣ ಸಂಬಂಧ  14 ಸೈಟ್ ವಾಪಸ್ ನೀಡುವುದಾಗಿ ತನ್ನ ಪತ್ನಿ ಪಾರ್ವತಿ ಅವರು ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ,   ಸೈಟ್ ವಾಪಸ್ ಬಗ್ಗೆ ನನ್ನ ಜೊತೆ ಚರ್ಚಿಸಿಲ್ಲ. ನನ್ನ ಹೆಂಡತಿ ಸ್ವತಂತ್ರ ನಿರ್ಧಾರ ತೆಗೆದುಕೊಂಡಿದ್ದಾರೆ. ನನ ಪತಿಗೆ ತೇಜೋವಧೆ ರಾಜಕೀಯ ದ್ವೇಷ ಮಾಡುತ್ತಿದ್ದಾರೆ.  ಹೀಗಾಗಿ ಸೈಟ್ ಬೇಡ ಎಂದು ವಾಪಸ್ ಕೊಟ್ಟಿದ್ದಾರೆ . ಮನನೊಂದು ಸೈಟ್ ವಾಪಸ್  ನೀಡಿದ್ದಾರೆ ಎಂದರು.

ನನ್ನ ಪತ್ನಿ ಜಮೀನನ್ನ ಮುಡಾದವರು ಸ್ವಾಧೀನಪಡಿಸಿಕೊಂಡಿದ್ದರು ಅದಕ್ಕೆ ಬದಲಿ ನಿವೇಶನ ಕೊಡಿ ಎಂದು ಕೇಳಿದ್ದವು.  ಆದರೆ ವಿಜಯನಗರದಲ್ಲಿ ನಿವೇಶನ ಕೊಡಿ ಎಂದು ಕೇಳಿರಲಿಲ್ಲ. ಆದರೆ   ಮುಡಾ ಅಧಿಕಾರಿಗಳು ವಿಜಯನಗರದಲ್ಲೇ ಸೈಟ್ ಕೊಟ್ಟಿದ್ದರು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ತಮ್ಮ ರಾಜೀನಾಮೆಗೆ ಬಿಜೆಪಿ ನಾಯಕರ ಆಗ್ರಹ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಮುಡಾ ಪ್ರಕರಣದಲ್ಲಿ ನನ್ನ  ಪಾತ್ರ ಇಲ್ಲ. ನಾನು ತಪ್ಪೇ ಮಾಡಿಲ್ಲ. ಯಾಕೆ ರಾಜೀನಾಮೆ ಕೊಡಬೇಕು ತಪ್ಪು ಮಾಡಿದ್ದರೇ ಮಾತ್ರ ರಾಜೀನಾಮೆ ಕೊಡಬೇಕು ಎಂದರು.

Key words: CM Siddaramaiah  site, return, wife, letter