Friday, August 14, 2026

BDA Apartments

Home Front Page ಅವರಲ್ಲೇ ಕುಟುಂಬ ರಾಜಕಾರಣ:  ಪ್ರಶ್ನಿಸಲು ಯಾವ ನೈತಿಕತೆ ಇದೆ- ಸಚಿವ ಹೆಚ್.ಸಿ ಮಹದೇವಪ್ಪ ವಾಗ್ದಾಳಿ.

ಅವರಲ್ಲೇ ಕುಟುಂಬ ರಾಜಕಾರಣ:  ಪ್ರಶ್ನಿಸಲು ಯಾವ ನೈತಿಕತೆ ಇದೆ- ಸಚಿವ ಹೆಚ್.ಸಿ ಮಹದೇವಪ್ಪ ವಾಗ್ದಾಳಿ.

ಚಾಮರಾಜನಗರ,ಮಾರ್ಚ್,27,2024(www.justkannada.in): ಸಚಿವರ ಪುತ್ರಿ, ಪುತ್ರರಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವ ಬಗ್ಗೆ ಟೀಕಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಸಚಿವ ಹೆಚ್.ಸಿ ಮಹದೇವಪ್ಪ ತಿರುಗೇಟು ನೀಡಿದ್ದಾರೆ.

ಚಾಮರಾಜನಗ ಕೊಳ್ಳೆಗಾಲದಲ್ಲಿ ಇಂದು ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡುವುದಕ್ಕೆ ಅವಕಾಶವಿದೆ. ಯಾರು ಜನಪರ ಇದ್ದಾರೆ ಅವರನ್ನ ತಡೆಯಲು ನಮಗೆ ಅಧಿಕಾರವಿಲ್ಲ. ವಿಜಯೇಂದ್ರ ಕುಟುಂಬದವರೇ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಹೀಗಿರುವಾಗ  ಪ್ರಶ್ನಿಸಲು ಅವರಿಗೆ ಯಾವ ನೈತಿಕತೆ ಇದೆ ಎಂದು ಕಿಡಿಕಾರಿದರು.

Key words: Family, politics, HC Mahadevappa