Saturday, August 15, 2026

BDA Apartments

Home Front Page ಲೋಕಸಭೆ ಚುನಾವಣೆ ಬಳಿಕ ಈ ಸರ್ಕಾರ  ಉಳಿಯಲ್ಲ- ಭವಿಷ್ಯ ನುಡಿದ ಕೆ.ಎಸ್ ಈಶ್ವರಪ್ಪ.

ಲೋಕಸಭೆ ಚುನಾವಣೆ ಬಳಿಕ ಈ ಸರ್ಕಾರ  ಉಳಿಯಲ್ಲ- ಭವಿಷ್ಯ ನುಡಿದ ಕೆ.ಎಸ್ ಈಶ್ವರಪ್ಪ.

ಬಾಗಲಕೋಟೆ,ಆಗಸ್ಟ್,28,2023(www.justkannada.in): ಲೋಕಸಭೆ ಚುನಾವಣೆ ಬಳಿಕ  ರಾಜ್ಯ ಕಾಂಗ್ರೆಸ್ ಸರ್ಕಾರ  ಉಳಿಯಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಭವಿಷ್ಯ ನುಡಿದರು.

ಬಾಗಲಕೋಟೆಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಲೋಕಸಭೆ ಚುನಾವಣೆ ಮುಗಿಯಲಿ. ಕಾಂಗ್ರೆಸ್ ನವರ ಪರಿಸ್ಥಿತಿ ಯಾವ ರೀತಿ ಆಗುತ್ತೆ ನೋಡುತ್ತಿರಿ. ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಇರಲ್ಲ. ಹಲವು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ.  ನಾವು ಕರೆಯೋದೇ ಬೇಡ. ಶಾಸಕರೇ ಬರ್ತಾರೆ ಎಂದರು.

ಪಕ್ಷಾಂತರ  ಪ್ರವೀಣ ಸಿದ್ದರಾಮಯ್ಯ.  ಡಿ.ಕೆ ಶಿವಕುಮಾರ್ ಮತ್ತು ಸಿಎಂ ಸಿದ‍್ಧರಾಮಯ್ಯಗೆ ಭಯ ಶುರುವಾಗಿದೆ. ಅವರಿಗೆ ನಿದ್ದೆ ಬರ್ತಿಲ್ಲ ಎಂದು ವ್ಯಂಗ್ಯವಾಡಿದರು.

Key words: government –will- not -after -LokSabha- elections – predicted- KS Eshwarappa.