Thursday, August 6, 2026

BDA Apartments

Home Front Page ಯತೀಂದ್ರ ಸಿದ್ಧರಾಮಯ್ಯಗೆ ಸರ್ಕಾರದ ಉನ್ನತ ಸ್ಥಾನ ನೀಡುವಂತೆ ಒತ್ತಾಯ: ದೇವರ ಮೊರೆ ಹೋದ ಅಭಿಮಾನಿಗಳು.

ಯತೀಂದ್ರ ಸಿದ್ಧರಾಮಯ್ಯಗೆ ಸರ್ಕಾರದ ಉನ್ನತ ಸ್ಥಾನ ನೀಡುವಂತೆ ಒತ್ತಾಯ: ದೇವರ ಮೊರೆ ಹೋದ ಅಭಿಮಾನಿಗಳು.

ಮೈಸೂರು,ಜೂನ್,29,2023(www.justkannada.in): ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಂದೆ ಸಿದ್ಧರಾಮಯ್ಯಗೆ ವರುಣಾ ಕ್ಷೇತ್ರ ಬಿಟ್ಟುಕೊಟ್ಟ ಪುತ್ರ ಯತೀಂದ್ರ ಸಿದ್ಧರಾಮಯ್ಯಗೆ ಸರ್ಕಾರದ ಉನ್ನತ ಸ್ಥಾನ ನೀಡುವಂತೆ  ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.

ಮಾಜಿ ಶಾಸಕ ಡಾ. ಯತೀಂದ್ರ ಸಿದ್ಧರಾಮಯ್ಯ ಹೆಸರಲ್ಲಿ ನಂಜನಗೂಡು ಹಾಗೂ ವರುಣ ಕ್ಷೇತ್ರದ ಅಭಿಮಾನಿಗಳು ನಂಜನಗೂಡಿನ  ನಂಜುಂಡೇಶ್ವರನಿಗೆ ಪೂಜೆ ಸಲ್ಲಿಸಿದ್ದಾರೆ. ತಗಡೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಸುಮಾರು 50ಕ್ಕೂ ಹೆಚ್ಚು ಕಾಂಗ್ರೆಸ್  ಕಾರ್ಯಕರ್ತರು ಪೂಜೆಯಲ್ಲಿ ಭಾಗಿಯಾಗಿದ್ದು, ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆಲುವಿಗೆ ಡಾ. ಯತಿಂದ್ರ ಹಗಲಿರುಳು ಶ್ರಮಿಸಿದ್ದಾರೆ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ. ಈ ಹಿನ್ನೆಲೆ ಮಾಜಿ ಶಾಸಕ ಡಾ. ಯತಿಂದ್ರಗೆ ಸರ್ಕಾರಿ ಉನ್ನತ ಸ್ಥಾನಮಾನ ನೀಡಬೇಕು. ಈ ಮೂಲಕ ಕ್ಷೇತ್ರಕ್ಕೆ ಹಾಗೂ ಜಿಲ್ಲೆಗೆ ಮತ್ತಷ್ಟು ಸೇವೆ ಅವರಿಂದ ದೊರೆಯಲಿದೆ ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.

Key words: Yathindra Siddaramaiah –position – government-Fans-worship