Thursday, August 6, 2026

BDA Apartments

Home Front Page ಭ್ರಮಲೋಕದ ಬಾದ್ ಷಾ ಸಿದ್ಧರಾಮಯ್ಯರನ್ನ ಜನ ತಿರಸ್ಕರಿಸಬೇಕು- ಸಚಿವ ಶ್ರೀರಾಮುಲು ಕರೆ.

ಭ್ರಮಲೋಕದ ಬಾದ್ ಷಾ ಸಿದ್ಧರಾಮಯ್ಯರನ್ನ ಜನ ತಿರಸ್ಕರಿಸಬೇಕು- ಸಚಿವ ಶ್ರೀರಾಮುಲು ಕರೆ.

ಚಿತ್ರದುರ್ಗ,ನವೆಂಬರ್,22,2022(www.justkannada.in): ಭ್ರಮಲೋಕದ ಬಾದ್ ಷಾ ಸಿದ್ಧರಾಮಯ್ಯರನ್ನ ಜನ ತಿರಸ್ಕರಿಸಬೇಕು ಎಂದು ಸಾರಿಗೆ ಸಚಿವ ಶ್ರೀರಾಮುಲು ಕರೆ ನೀಡಿದರು.

ಚಿತ್ರದುರ್ಗದ ಹಿರಿಯೂರಿನಲ್ಲಿ ನಡೆದ ಬಿಜೆಪಿ ಜನಸಂಕಲ್ಪಯಾತ್ರೆಯಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ಎಸ್ ಸಿ,  ಎಸ್ ಟಿ ಸಮುದಾಯಕ್ಕೆ ಕಾಂಗ್ರೆಸ್ ಸುಳ್ಳು ಹೇಳುತ್ತಾ ಬಂದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಭ್ರಮಲೋಕದ ಬಾದ್ ಷಾ. ಭ್ರಮಲೋಕದ ಬಾದ್ ಷಾರನ್ನ ಜನ ತಿರಸ್ಕರಿಸಬೇಕು.

ಕೊಪ್ಪಳದಲ್ಲಿ ನಿನ್ನೆ ರಾತ್ರಿ ಕಾಂಗ್ರೆಸ್ ಅಭ್ಯರ್ಥಿಗಳನ್ನ ಸಿದ್ಧರಾಮತ್ತ ಘೋಷಣೆ ಮಾಡಿದ್ದಾರೆ. ಆದರೆ ಡಿಕೆ ಶಿವಕುಮಾರ್ ಇದನ್ನ ವಿರೋಧ ಮಾಡಿದ್ದಾರೆ.  ಅಭ್ಯರ್ಥಿ ಘೋಷಣೆ ಅಧಿಕಾರ ಯಾರಿಗೂ ಇಲ್ಲ ಎಂದಿದ್ದಾರೆ. ಡಿಕೆ ಶಿವಕುಮಾರ್ ಮತ್ತು  ಸಿದ್ಧರಾಮಯ್ಯ ನಡುವೆ ಗೂಳಿ ಕಾಳಗ ನಡೆದಿದೆ ಎಂದು ವಾಗ್ದಾಳಿ ನಡೆಸಿದರು.treat-rate-health-minister-sriramulu-warning-private-hospitals

ಮಾಜಿ ಸಿಎಂ ಸಿದ್ಧರಾಮಯ್ಯ ಪರದೇಶಿಯರಂತೆ ಅಲೆದಾಡುತ್ತಿದ್ದಾರೆ. ಚುನಾವಣೆಗೆ ಸ್ಪರ್ಧಿಸಲು ಕ್ಷೇತ್ರಗಳೇ ಸಿಗುತ್ತಿಲ್ಲ. ವರುಣಾ ಕ್ಷೇತ್ರದಲ್ಲಿ ರಾಜಾಹುಲಿ ಬಡಿಗೆ ಹಿಡಿದು ನಿಂತಿದ್ದಾರೆ. ವರುಣಾದಲ್ಲಿ ಬಿಜೆಪಿಯಿಂದ ಯಾರು ಸ್ಪರ್ಧಿಸಬೇಕೆಂದು ಬಿಎಸ್ ವೈ ನಿರ್ಧರಿಸುತ್ತಾರೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.

Key words: Chitradurga-Former CM-Siddaramaiah-minister-sriramulu