ಉಪಹಾರದ ವೇಳೆ ತಟ್ಟೆಯಲ್ಲಿ ಹುಳು ಪತ್ತೆ: ಸ್ಪೀಕರ್ ಯು.ಟಿ ಖಾದರ್ ಗರಂ.

ಬೆಂಗಳೂರು,ಫೆಬ್ರವರಿ,13,2024(www.justkannada.in): ಉಪಹಾರದ ವೇಳೆ ಮಾಧ್ಯಮ ಪ್ರತಿನಿಧಿಯೊಬ್ಬರ ತಟ್ಟೆಯಲ್ಲಿ ಹುಳುಪತ್ತೆಯಾದ ಘಟನೆ ನಡೆದಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಕ್ಯಾಟ್ರಿಂಗ್ ಉಸ್ತುವಾರಿ ವಹಿಸಿಕೊಂಡಿರುವವರ ವಿರುದ್ದ ಸ್ಪೀಕರ್ ಯುಟಿ ಖಾದರ್ ಗರಂ ಆದರು.

ಚಾಲುಕ್ಯ ವೃತ್ತ ಸಮೀಪದ ಬಾಲುಬ್ರೂಯಿ ಅತಿಥಿಗೃಹ  ಕಟ್ಟಡವನ್ನು ಪಾರಂಪರಿಕ ವಿನ್ಯಾಸಕ್ಕೆ ಒಳಪಟ್ಟು ನವೀಕರಣ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಈ  ಹಿನ್ನೆಲೆ ಅತಿಥಿಗಳಿಗೆ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಆಹಾರ ಪದಾರ್ಥ ಸೇವಿಸುವಾಗ ಸಾಂಬಾರಿನಲ್ಲಿ ಮಾಧ್ಯಮ ಪ್ರತಿನಿಧಿಯೊಬ್ಬರ ತಟ್ಟೆಯಲ್ಲಿ ಹುಳುಪತ್ತೆಯಾಗಿತ್ತು.

ಉಪಹಾರ ವ್ಯವಸ್ಥೆಯನ್ನು ಬೆಂಗಳೂರಿನ ಮೆಜೆಸ್ಟಿಕ್ ಸಮೀಪದಲ್ಲಿನ ಸೌತ್ ರುಚಿ ರೆಸ್ಟೋರೆಂಟ್ ನಿಂದ ವ್ಯವಸ್ಥೆ ಮಾಡಲಾಗಿತ್ತು. ಮಾಧ್ಯಮ ಪ್ರತಿನಿಧಿಯೊಬ್ಬರ ತಟ್ಟೆಯಲ್ಲಿ ಹುಳು ಪತ್ತೆಯಾಗಿತ್ತು.

ಯುಟಿ ಖಾದರ್ ಗರಂ:

ಆಹಾರ ಪದಾರ್ಥದಲ್ಲಿ ಹುಳು ಪತ್ತೆ ಬಗ್ಗೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರ ಗಮನಕ್ಕೆ  ತಂದಾಗ ಕ್ಯಾಟ್ರಿಂಗ್ ಉಸ್ತುವಾರಿ ವಹಿಸಿಕೊಂಡಿರುವವರ ವಿರುದ್ಧ ಗರಂ ಆದರು.  ಹೋಟೆಲ್ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು.

Key words: Worm- found – plate- during –breakfast- Speaker- UT Khader