Friday, August 14, 2026

BDA Apartments

Home Cinema ಅನಾರೋಗ್ಯದ ಬಳಿಕ ಆಧ್ಯಾತ್ಮಿಕ ಗುರು ಭೇಟಿ ಮಾಡಿದ ರಜನಿ ಹೇಳಿದ್ದೇನು ?!

ಅನಾರೋಗ್ಯದ ಬಳಿಕ ಆಧ್ಯಾತ್ಮಿಕ ಗುರು ಭೇಟಿ ಮಾಡಿದ ರಜನಿ ಹೇಳಿದ್ದೇನು ?!

ಬೆಂಗಳೂರು, ಜನವರಿ 03, 2020 (www.justkannada.in): ರಜನೀಕಾಂತ್ ಇಂದು ತಮ್ಮ ಆಧ್ಯಾತ್ಮಿಕ ಗುರು ನಮೋ ನಾರಾಯಣಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ.

ನಮೋ ನಾರಾಯಣಸ್ವಾಮಿ ಅವರು ಇಂದು ರಜನೀಕಾಂತ್ ಅವರ ಪೋಯಸ್ ಗಾರ್ಡನ್‌ನ ನಿವಾಸಕ್ಕೆ ಬಂದಿದ್ದರು.

ತಮ್ಮ ಅನಾರೋಗ್ಯ ಹಾಗೂ ರಾಜಕೀಯ ಪ್ರವೇಶದಿಂದ ಹಿಂದೆ ಸರಿದ ಕಾರಣವನ್ನು ತಮ್ಮ ಗುರುಗಳ ಬಳಿ ರಜನೀಕಾಂತ್ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ನಮೋ ನಾರಾಯಣ್ ಅವರನ್ನು ಪೂಜನೀಯವಾಗಿ ಸ್ವಾಗತಿಸಿದ ರಜನೀಕಾಂತ್ ದಂಪತಿಗೆ ಶ್ರೀಗಳು ಆಶೀರ್ವಾದ ಮಾಡಿದ್ದಾರೆ.