Sunday, August 16, 2026

BDA Apartments

Home Front Page ಗಾಂಭೀರ್ಯದಿಂದ ನಡೆದುಕೊಳ್ಳಿ, ವಿದೂಷಕನಂತೆ ಕೆಲಸ ಮಾಡಬೇಡಿ : ಎಚ್.ಡಿ.ಕುಮಾರಸ್ವಾಮಿ ಟೀಕೆ 

ಗಾಂಭೀರ್ಯದಿಂದ ನಡೆದುಕೊಳ್ಳಿ, ವಿದೂಷಕನಂತೆ ಕೆಲಸ ಮಾಡಬೇಡಿ : ಎಚ್.ಡಿ.ಕುಮಾರಸ್ವಾಮಿ ಟೀಕೆ 

ಬೆಂಗಳೂರು,ಅಕ್ಟೋಬರ್,29,2020(www.justkannada.in) : ರಾಷ್ಟ್ರೀಯ ಪಕ್ಷದ ಅಧ್ಯಕ್ಷನಾಗಿ ಗಾಂಭೀರ್ಯದಿಂದ ನಡೆದುಕೊಳ್ಳಿ. ವಿದೂಷಕನಂತೆ ಕೆಲಸ ಮಾಡಬೇಡಿ. ನೀವು ಹೇಳಿರುವ ಭೀಮಾರ್ಜುನ, ಕೃಷ್ಣರಿಗೆ ನಿಜವಾಗಿಯೂ ಆ ಯೋಗ್ಯತೆ ಹೊಂದಿದ್ದಾರಾ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

jk-logo-justkannada-logo

ಶಿರಾದಲ್ಲಿ ಉಪಚುನಾವಣೆ ಪ್ರಚಾರದ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಶಿರಾ ಉಪಚುನಾವಣೆ ಯುದ್ಧಕ್ಕೆ ಪಂಚ ಪಾಂಡವರನ್ನು ಕಳಿಸಿ ಕೊಟ್ಟಿದ್ದೇವೆ ಎಂದು ನೀಡಿದ್ದ ಹೇಳಿಕೆಗೆ ಎಚ್.ಡಿ.ಕೆ. ಕಿಡಿಕಾರಿದ್ದಾರೆ.

ಧರ್ಮ ಯುದ್ಧದಲ್ಲಿ ಗೆಲ್ಲುವುದಕ್ಕೆ ಸಂದೇಶ ಏನಿದೆ?

ಧರ್ಮ ಯುದ್ಧದಲ್ಲಿ ಗೆಲ್ಲುವುದಕ್ಕೆ ಸಂದೇಶ ಏನಿದೆ. ನಳಿನ್ ಕುಮಾರ್ ಹೇಳಿರುವ ಪಂಚ ಪಾಂಡವರಿಗೆ ಆ ಯೋಗ್ಯತೆ ಹೊಂದಿದ್ದಾರ. ಗಾಂಭೀರ್ಯದಿಂದ ನಡೆದುಕೊಳ್ಳಿ ಎಂದು ನಳಿನ್ ಕುಮಾರ್ ಕಟೀಲ್ ಗೆ ಹೇಳಿದ್ದಾರೆ.

ಅಧರ್ಮ ಯುದ್ಧವನ್ನು ಬಿಜೆಪಿಯುವರು ಮಾಡುತ್ತಿದ್ದಾರೆ

ಅಕ್ರಮವಾಗಿ ಹಣ ಸಂಪಾದನೆ ಮಾಡಿಕೊಂಡು ಕುಳಿತಿದ್ದಾರೆ.  ಜನರು ರಸ್ತೆಯಲ್ಲಿ ಊಟಕ್ಕೂ ಗತಿಯಿಲ್ಲದೆ ಮಲಗಿದ್ದಾರೆ. ಅವರ ಕಡೆಗೆ ತಿರುಗಿ ನೋಡುವ ಯೋಗ್ಯತೆಯಿಲ್ಲ. ಅಧರ್ಮ ಯುದ್ಧವನ್ನು ಬಿಜೆಪಿಯುವರು ಮಾಡುತ್ತಿದ್ದು, ಜೆಡಿಎಸ್ ನಡೆಸುತ್ತಿರುವುದು ಧರ್ಮ ಯುದ್ಧ ಎಂದು ತಿಳಿಸಿದ್ದಾರೆ.

Walk,dignity,Don't,act,clown,H.D.Kumaraswamy's,criticism

key words : Walk-dignity-Don’t-act-clown-H.D.Kumaraswamy’s-criticism