Wednesday, September 16, 2026

BDA Apartments

ಬಜೆಟ್ ಅಧಿವೇಶನದಲ್ಲಿ ಎಲ್ಲಾ ಶಾಸಕರು ಭಾಗಿಯಾಗಿ – ಸ್ಪೀಕರ್ UT ಖಾದರ್ ಕರೆ BDA JK_Ad...
Home Front Page ಬಜೆಟ್ ಅಧಿವೇಶನದಲ್ಲಿ ಎಲ್ಲಾ ಶಾಸಕರು ಭಾಗಿಯಾಗಿ – ಸ್ಪೀಕರ್ UT ಖಾದರ್ ಕರೆ

ಬಜೆಟ್ ಅಧಿವೇಶನದಲ್ಲಿ ಎಲ್ಲಾ ಶಾಸಕರು ಭಾಗಿಯಾಗಿ – ಸ್ಪೀಕರ್ UT ಖಾದರ್ ಕರೆ

ಮಂಗಳೂರು,ಮಾರ್ಚ್,7,2026 (www.justkannada.in): ಬಜೆಟ್ ಅಧಿವೇಶನದಲ್ಲಿ ಎಲ್ಲಾ ಎಲ್ಲ ಶಾಸಕರು ಭಾಗಿಯಾಗುವಂತೆ ಸ್ಪೀಕರ್ ಯುಟಿ ಖಾದರ್ ಕರೆ ನೀಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸ್ಪೀಕರ್ ಯು.ಟಿ ಖಾದರ್ ಎಲ್ಲ ಪಕ್ಷಗಳ ಶಾಸಕರು ಬಜೆಟ್ ಅದಿವೇಶನದಲ್ಲಿ ಭಾಗಿಯಾಗಬೇಕು ಶಾಸಕರು ಪರಿಷತ್ ಸದಸ್ಯರಿಗೆ ಕಾರ್ಯಗಾರ ಆಯೋಜಿಸಲಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.  ಬಜೆಟ್ ಗೆ ಸಂಬಂಧಿಸಿದ ಹಲವು ಮಾಹಿತಿ ನೀಡಲಾಗುತ್ತೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾರ್ಯಗಾರ ನಡೆಯಲಿದೆ ಎಂದರು.

ಸಿಎಂ ಸಿದ್ದರಾಮಯ್ಯ 17 ಬಾರಿ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಬಜೆಟ್ ವಿಚಾರದಲ್ಲಿ ಸಿದ್ದರಾಮಯ್ಯಗೆ ಅಪಾರ ಅನುಭವವಿದೆ. ಮೊದಲ ಬಾರಿಗೆ ಬಜೆಟ್ ಗೆ ಸಂಬಂಧಿಸಿದ ಕಾರ್ಯಗಾರ ಆಯೋಜನೆ ಮಾಡಲಾಗಿದೆ. ಕಾರ್ಯಗಾರದಲ್ಲಿ ಎಲ್ಲಾ ಶಾಸಕರು ಕಡ್ಡಾಯವಾಗಿ ಭಾಗವಹಿಸಬೇಕು ಯಾವ ಸದಸ್ಯರು ಭಾಗಿಯಾಗುತ್ತಾರೋ ಅಂತವರಿಗೆ  ಅಧಿವೇಶನದಲ್ಲಿ ಮೊದಲು ಮಾತನಾಡಲು ಅವಕಾಶ ನೀಡಲಾಗುತ್ತದೆ.  ನನ್ನ ಅಧಿಕಾರ ವ್ಯಾಪ್ತಿ ಬಳಸಿ ಅಧೀವೇಶನದಲ್ಲಿ ಮಾತನಾಡಲು ಅವಕಾಶ ಕೊಡುವೆ ಎಂದು  ಸ್ಪೀಕರ್ ಯುಟಿ ಖಾದರ್ ತಿಳಿಸಿದರು.

Key words: All, MLAs,  budget session, Speaker, UT Khader