Tuesday, August 4, 2026

BDA Apartments

Home Crime ಕಾರು ಡಿಕ್ಕಿಯಾಗಿ ಶಾಲೆಯಿಂದ ಮನೆಗೆ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಸಾವು: ಸ್ಥಳಕ್ಕೆ ಸಚಿವ ಮುನಿರತ್ನ ಭೇಟಿ.

ಕಾರು ಡಿಕ್ಕಿಯಾಗಿ ಶಾಲೆಯಿಂದ ಮನೆಗೆ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಸಾವು: ಸ್ಥಳಕ್ಕೆ ಸಚಿವ ಮುನಿರತ್ನ ಭೇಟಿ.

ಬಾಗಲಕೋಟೆ,ಮೇ,25,2022(www.justkannada.in): ಕಾರು ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆ  ಹುನಗುಂದ ತಾಲ್ಲೂಕಿನ ಕ್ಯಾದಗೇರಿ ಕ್ರಾಸ್ ಬಳಿ ನಡೆದಿದೆ.

ನೇತ್ರವಾತಿ ರಗಟಿ(14) ಅಂಜಲಿ ಸೂಡಿ(14) ಮೃತ ವಿದ್ಯಾರ್ಥಿನಿಯರು. ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಶಾಲೆ ಮುಗಿಸಿ ಐಹೊಳೆಯಿಂದ ಚಿಲ್ಲಾಪುರಕ್ಕೆ ವಿದ್ಯಾರ್ಥಿಗಳು ತೆರಳುತ್ತಿದ್ದರು. ಈ ವೇಳೆ ಕಾರು ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.tractor-collision-bike-bike-rider-dies-on-the-spot-mysore

ಐಹೊಳೆ ಪ್ರವಾಸದಲ್ಲಿದ್ದ  ತೋಟಗಾರಿಕೆ ಸಚಿವ ಮುನಿರತ್ನ  ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಾರು ಚಾಲಕ ಪರಾರಿಯಾಗಿದ್ದು ಈ ಕುರಿತು ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Two students death- car -collision.