ಪಠ್ಯ ಪರಿಷ್ಕರಣೆ: ಬಿಜೆಪಿ ಸರ್ಕಾರ ಸೇರಿಸಿದ್ಧ ವಿಷಯಗಳಿಗೆ ಕೋಕ್:  ಹೊಸ ಅಂಶಗಳ ಸೇರ್ಪಡೆ- ಶಿಕ್ಷಣ ಸಚಿವ ಮಧು ಬಂಗಾರಪ್ಪ.

ಬೆಂಗಳೂರು,ಜೂನ್,15,2023(www.justkannada.in): ಪಠ್ಯ ಪರಿಷ್ಕಣೆಗೆ ತೀರ್ಮಾನ ಮಾಡಲಾಗಿದ್ದು,  ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೇರ್ಪಡೆಯಾಗಿದ್ದ ವಿಷಯಗಳನ್ನ ತೆಗೆಯಲಾಗಿದೆ  ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಪಠ್ಯ ಪುಸ್ತಕ ಪರಿಷ್ಕರಣೆ ಆಗಲಿದೆ. ಮಕ್ಕಳಿಗೆ ಸಪ್ಲಿಮೆಂಟರಿ ಪುಸ್ತಕ ನೀಡಲಾಗುವುದು. ಆದಷ್ಟು ಬೇಗ ಪಠ್ಯ ಪಸ್ತಕ ಪರಿಷ್ಕರಣೆ ಮಾಡಲಾಗುತ್ತದೆ.  ಕನ್ನಡದಲ್ಲಿ 6ರಿಂದ 10ನೇ ತರಗತಿ ಕೆಲವು ಬದಲಾವಣೆ ಮಾಡಲಾಗಿದೆ. ಸಮಾಜ ವಿಜ್ಞಾನದಲ್ಲಿ 6ರಿಂದ10ನೇ ತರಗತಿಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ ಎಂದರು.

ಬಿಜೆಪಿ ಸೇರಿಸಿದ್ದ ಕೇಶವ್ ಹೆಗ್ಡೆವಾರ್ ಭಾಷಣ, ಸಾವರ್ಕರ್,  ಚಕ್ರವರ್ತಿ ಸೂಲಬೆಲೆ ಬರೆದ ಅಂಶಗಳನ್ನ ತೆಗೆದಿದ್ದೇವೆ. ಸಾವಿತ್ರಿ ಪುಲೆ, ನೆಹರು, ಅಂಬೇಡ್ಕರ್ ಅವರ ವಿಷಯವನ್ನ ಸೇರಿಸಲಾಗಿದೆ.  ಮಕ್ಕಳು ಸರಿಯಾದ ವಿಚಾರ ಕಲಿಯಬೇಕೆಂದು ಈ ನಿರ್ಧಾರ ಕೈಗೊಂಡಿದ್ದೇವೆ. ನಾವು ತುಂಬಾ ಆಳವಾಗಿ ಹೋಗಬೇಕಿತ್ತು. ಆದರೆ ಹೋಗಿಲ್ಲ. ಯಾವ ಪಾಠ ಮಾಡಬೇಕೆಂದು ಶಿಕ್ಷಕರಿಗೆ ಮಾರ್ಗಸೂಚಿ ನೀಡಲಾಗುತ್ತದೆ.  ಸರ್ಕಾರಕ್ಕೆ ಹೊರೆಯಾಗದಂತೆ ಸರಳವಾಗಿ ಪಠ್ಯ ಪರಿಷ್ಕರಣೆ ಮಾಡುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

Key words: Text Revision- Topics-Addition  – Education Minister -Madhu Bangarappa