ತಿಂಗಳ ಅಂತ್ಯಕ್ಕೆ ಕೆಜಿಎಫ್ ತಂಡದಿಂದ ಅಭಿಮಾನಿಗಳಿಗೆ ಸರ್’ಪ್ರೈಸ್ !

ಬೆಂಗಳೂರು, ಜುಲೈ 25, 2019 (www.justkannada.in): ಕೆ.ಜಿ.ಎಫ್-2 ಚಿತ್ರತಂಡ ಬಿಗ್ ಸರ್​ಪ್ರೈಸ್ ನೀಡಲು ಮುಂದಾಗಿದೆ.

ನಿರ್ದೇಶಕ ಪ್ರಶಾಂತ್ ನೀಲ್ ಇತ್ತೀಚೆಗೆ ಮಾಡಿರುವ ಟ್ವೀಟ್ ಈ ಸುಳಿವು ನೀಡಿದೆ. ‘ಅಧೀರ’ ಪಾತ್ರದ ಫಸ್ಟ್​ ಲುಕ್ ಎಂಬ ಮಾತುಗಳು ಕೇಳಿ ಬರುತ್ತಿವೆ.

ಚಾಪ್ಟರ್​-2 ಆರಂಭದಿಂದಲೂ ರಾಕಿ ಭಾಯ್​ಗೆ ಟಕ್ಕರ್ ಕೊಡುವ ಪಾತ್ರದಲ್ಲಿ ಬಾಲಿವುಡ್​ ನಟ ಸಂಜಯ್ ದತ್ ನಟಿಸಲಿದ್ದಾರೆ ಎನ್ನಲಾಗಿತ್ತು. ಅಧೀರನ ಪಾತ್ರದಲ್ಲಿ ಅಭಿನಯಿಸಲು ‘ಮುನ್ನಭಾಯ್’ ಓಕೆ ಅಂದಿದ್ದಾರೆ ಎಂಬ ಸುದ್ದಿಗಳು ಸಹ ಹರಿದಾಡಿದ್ದವು. ಆದರೆ ಈ ಪ್ರಶ್ನೆಗೆ ಅಧಿಕೃತ ಉತ್ತರ ಬಂದಿಲ್ಲ.